- Advertisement -
![]()
- Advertisement -
ಬೆಂಗಳೂರು: ದರ್ಶನ್ ಅಭಿನಯದ “ನವಗ್ರಹ’ ಚಲನಚಿತ್ರ ಮತ್ತೆ ಚಿತ್ರಮಂದಿರಗಳಲ್ಲಿ ಶೀಘ್ರ ಬಿಡುಗಡೆಗೊಳ್ಳಲಿದ್ದು, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಈ ಕುರಿತು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೂ, ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಬಂಧನದಲ್ಲಿರುವ ದರ್ಶನ್ ಅವರ ಬಿಡುಗಡೆಗೂ ಸಂಬಂಧವಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ವಿಜಯಲಕ್ಷ್ಮೀ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ “ನಿಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೆ ಉಳಿದ ಚಿತ್ರ ನವಗ್ರಹ ಅತೀ ಶೀಘ್ರದಲ್ಲಿ ರೀ ರಿಲೀಸ್ ಆಗಲಿದೆ. ಇದು ಮೊದಲಿಗಿಂತ ಜಾಸ್ತಿ ಸ್ಪೆಷಲ್ ಆಗಿರಲಿದೆ. ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ” ಎಂದು ಬರೆದುಕೊಂಡಿದ್ದಾರೆ.
- Advertisement -


