- Advertisement -
- Advertisement -
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿ ಮಾಡಿದ್ದಾರೆ. ಈ ವೇಳೆ ಪತ್ನಿ ಹಾಗೂ ಪುತ್ರನ ಮುಂದೆ ಡಿ ಬಾಸ್ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಪುತ್ರ ವಿನೀಶ್ ನನ್ನು ಬಿಗಿದಪ್ಪಿಕೊಂಡು ಡಿ ಬಾಸ್ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಇದೇ ವೇಳೆ ಈ ಪ್ರಕರಣ ಸಂಬಂಧ ಪತ್ನಿಯ ಜೊತೆಗೆ ಕೆಲ ಕಾಲ ದರ್ಶನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೇ ಪತ್ನಿ ಜೊತೆಗೆ ಮಾತನಾಡುವಾಗಲೂ ನಟ ದರ್ಶನ್ ಭಾವುಕರಾಗಿದ್ದರು ಎನ್ನಲಾಗುತ್ತಿದೆ.
- Advertisement -