ಬೆಂಗಳೂರು; ತನ್ನ ಅಭಿಮಾನಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಂದ ಅರೆಸ್ಟ್ ಆಗಿರುವ ನಟ ದರ್ಶನ್ ಮಾಡಿಕೊಂಡಿರುವ ಕಿರಿಕ್ ಗಳು ಒಂದೆರಡಲ್ಲ. ಸದಾ ವಿವಾದಗಳಿಂದಲೇ ಸುದ್ದಿಯಾಗುವ ದರ್ಶನ್ ಇದೀಗ ತನ್ನ ಹೆತ್ತ ತಾಯಿ ಜೊತೆನೂ ಮಾತನಾಡುತ್ತಿಲ್ಲ ಅನ್ನೋ ವಿಚಾರ ಗೊತ್ತಾಗಿದೆ.
ದರ್ಶನ್ ಮಾಡಿದ ಕೆಲಸದಿಂದ ಶಾಕ್ ಗೆ ಒಳಗಾಗಿರುವ ಪತ್ನಿ ವಿಜಯಲಕ್ಷ್ಮೀ, ಇನ್ಸ್ಟಾಗ್ರಾಂನಲ್ಲಿ ದರ್ಶನ್ರನ್ನು ಅನ್ಫಾಲೋ ಮಾಡಿ, ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ದರ್ಶನ್ಗೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ದರ್ಶನ್ ಅವರ ತಾಯಿ ಹಾಗೂ ಸಹೋದರ ಸಹ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.
ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಮತ್ತು ಸಹೋದರ ದಿನಕರ್ ತೂಗುದೀಪ್ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿರುವ ಮೀನಾ ತೂಗುದೀಪ್, ದರ್ಶನ್ ಬಗ್ಗೆ ಮಾತನಾಡಲು ಒಪ್ಪುತ್ತಿಲ್ಲ. ದಿನಕರ್ ಕೂಡ ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ದರ್ಶನ್ ಅವರು ಈಗಾಗಲೇ ತಾಯಿ ಜತೆ ಜಗಳ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಮೀನಾ ತೂಗುದೀಪ್ ಅವರು ತಮ್ಮ ಕಿರಿಯ ಪುತ್ರ ದಿನಕರ್ ಕುಟುಂಬದ ಜತೆ ಇರುವುದಾಗಿ ತಿಳಿದುಬಂದಿದೆ. ತಾನು ಹುಟ್ಟಿ ಬೆಳೆದ ಮೈಸೂರಿನಲ್ಲಿರುವ ಮನೆಗೆ ದರ್ಶನ್ ಇತ್ತೀಚಿಗೆ ಬರುತ್ತಿಲ್ಲ ಎನ್ನಲಾಗಿದೆ.