Friday, June 27, 2025
Homeತಾಜಾ ಸುದ್ದಿಅಮ್ಮನ ಜೊತೆಯೂ ಮಾತು ಬಿಟ್ಟ ದರ್ಶನ್ ; ಸಹೋದರನ ಬಗ್ಗೆ ಮಾತನಾಡಲು ದಿನಕರ್ ತೂಗುದೀಪ ಹಿಂದೇಟು

ಅಮ್ಮನ ಜೊತೆಯೂ ಮಾತು ಬಿಟ್ಟ ದರ್ಶನ್ ; ಸಹೋದರನ ಬಗ್ಗೆ ಮಾತನಾಡಲು ದಿನಕರ್ ತೂಗುದೀಪ ಹಿಂದೇಟು

spot_img
- Advertisement -
- Advertisement -

ಬೆಂಗಳೂರು; ತನ್ನ ಅಭಿಮಾನಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಂದ ಅರೆಸ್ಟ್ ಆಗಿರುವ ನಟ ದರ್ಶನ್ ಮಾಡಿಕೊಂಡಿರುವ ಕಿರಿಕ್ ಗಳು ಒಂದೆರಡಲ್ಲ. ಸದಾ ವಿವಾದಗಳಿಂದಲೇ ಸುದ್ದಿಯಾಗುವ ದರ್ಶನ್ ಇದೀಗ ತನ್ನ ಹೆತ್ತ ತಾಯಿ ಜೊತೆನೂ ಮಾತನಾಡುತ್ತಿಲ್ಲ ಅನ್ನೋ ವಿಚಾರ ಗೊತ್ತಾಗಿದೆ.

 ದರ್ಶನ್​ ಮಾಡಿದ ಕೆಲಸದಿಂದ ಶಾಕ್ ಗೆ ಒಳಗಾಗಿರುವ ಪತ್ನಿ ವಿಜಯಲಕ್ಷ್ಮೀ, ಇನ್​ಸ್ಟಾಗ್ರಾಂನಲ್ಲಿ ದರ್ಶನ್​ರನ್ನು ಅನ್​ಫಾಲೋ ಮಾಡಿ, ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ. ದರ್ಶನ್​ಗೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ನಡುವೆ ದರ್ಶನ್​ ಅವರ ತಾಯಿ ಹಾಗೂ ಸಹೋದರ ಸಹ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.

ದರ್ಶನ್​ ಅವರ ತಾಯಿ ಮೀನಾ ತೂಗುದೀಪ್​ ಮತ್ತು ಸಹೋದರ ದಿನಕರ್​ ತೂಗುದೀಪ್​ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನೆಲೆಸಿರುವ ಮೀನಾ ತೂಗುದೀಪ್​, ದರ್ಶನ್​ ಬಗ್ಗೆ ಮಾತನಾಡಲು ಒಪ್ಪುತ್ತಿಲ್ಲ. ದಿನಕರ್​ ಕೂಡ ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನು ದರ್ಶನ್​ ಅವರು ಈಗಾಗಲೇ ತಾಯಿ ಜತೆ ಜಗಳ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಮೀನಾ ತೂಗುದೀಪ್​ ಅವರು ತಮ್ಮ ಕಿರಿಯ ಪುತ್ರ ದಿನಕರ್​ ಕುಟುಂಬದ ಜತೆ ಇರುವುದಾಗಿ ತಿಳಿದುಬಂದಿದೆ. ತಾನು ಹುಟ್ಟಿ ಬೆಳೆದ ಮೈಸೂರಿನಲ್ಲಿರುವ ಮನೆಗೆ ದರ್ಶನ್​ ಇತ್ತೀಚಿಗೆ ಬರುತ್ತಿಲ್ಲ ಎನ್ನಲಾಗಿದೆ.

- Advertisement -
spot_img

Latest News

error: Content is protected !!