- Advertisement -
- Advertisement -
ಶಿರೂರು : ಭಾರೀ ಮಳೆಗೆ ಬಹುತೇಕ ಶಿರೂರು ಜಲಾವೃತಗೊಂಡಿದೆ. ಇನ್ನು ಶಿರೂರು ಸಮುದ್ರ ತೀರದಲ್ಲಿ ನಿಲ್ಲಿಸಿದ್ದ ಹಲವು ಮೀನುಗಾರಿಕಾ ದೋಣಿಗಳಿಗೆ ಹಾನಿಯಾಗಿದೆ. ಇದ್ರಿಂದ ಮೀನುಗಾರರಿಗೆ ಲಕ್ಷಾಂತರ ರೂ ನಷ್ಟವಾಗಿದೆ.
ಈ ಭಾಗದಲ್ಲಿ ಅಗ್ನಿಶಾಮಕ ಸಿಬ್ಬಂದಿ ಜನರ ನೆರವಿಗೆ ಧಾವಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಧಿಕಾರಿಗಳ ಜೊತೆಗೆ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎರಡು ವಾರಗಳ ಹಿಂದೆ ಈ ಭಾಗದಲ್ಲಿ ಇಂತಹದ್ದೇ ಮಳೆಯಾಗಿ ಭಾರೀ ಪ್ರಮಾಣದಲ್ಲಿ ಹಾನಿಯುಂಟಾಗಿತ್ತು.
- Advertisement -