- Advertisement -
- Advertisement -
ಉಡುಪಿ: ಸುರಿಯುತ್ತಿದ್ದ ಮಳೆಯ ನಡುವೆಯೇ ದೈವ ಕೋಲದ ಸೇವೆ ಉಡುಪಿಯಲ್ಲಿ ನಡೆದಿದೆ.ಉಡುಪಿಯ ಅಲೆವೂರಿನಲ್ಲಿ ಬಬ್ಬುಸ್ವಾಮಿ ದೈವದ ನೇಮೋತ್ಸವ ಮಳೆಯ ನಡುವೆಯೇ ಜರುಗಿದೆ.
ನೇಮೋತ್ಸವ ಆರಂಭವಾಗುತ್ತಲೇ ಮಳೆ ಕೂಡಾ ಜೋರಾಗಿ ಸುರಿಯಲು ಆರಂಭಿಸಿದ್ದು, ನರ್ತನ ಸೇವೆ ಮುಂದುವರಿದಿದೆ.
ಜೋರಾಗಿ ಮಳೆ ಸುರಿದರೂ ದೈವ ನರ್ತಕ ನರ್ತನ ನಿಲ್ಲಿಸದೇ ಮುಂದುವರಿಸಿದ್ದು, ಮಳೆಯಲ್ಲಿ ದೈವ ನರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
- Advertisement -