Friday, May 10, 2024
Homeಜ್ಯೋತಿಷ್ಯಶುಕ್ರವಾರದ ರಾಶಿ ಭವಿಷ್ಯ : ಶುಕ್ರವಾರ ಯಾರ ಪಾಲಿಗೆ ಶುಭ ತರಲಿದೆ?

ಶುಕ್ರವಾರದ ರಾಶಿ ಭವಿಷ್ಯ : ಶುಕ್ರವಾರ ಯಾರ ಪಾಲಿಗೆ ಶುಭ ತರಲಿದೆ?

spot_img
- Advertisement -
- Advertisement -

ಮೇಷ- ಸದಾಕಾಲ ಕಾರ್ಯ ಪ್ರವೃತ್ತರಾಗಿ ದುಡಿಯುವ ನಿಮಗೆ ಈ ದಿನ ಉತ್ತಮ ಫಲಗಳು ಅನುಭವಕ್ಕೆ ಬರಲಿದೆ. ಅಗೌರವವಾಗುವ ಸನ್ನಿವೇಶ ಎದುರಾಗಿ ಕೊನೆಯ ಕ್ಷಣದಲ್ಲಿ ಹಣಕಾಸಿನ ಹೊಂದಿಕೆಯಾಗುವುದು. ಅವಿವಾಹಿತರಿಗೆ ನಿರೀಕ್ಷೆಗೆ ಪೂರಕವಾದ ಪ್ರಚೋದನೆ ಲಭಿಸಲಿದೆ.

ವೃಷಭ- ಪ್ರತಿಷ್ಠಿತ ಅಧಿಕಾರಕ್ಕಾಗಿ ಸಮಬಲ ಹೋರಾಟ ನಡೆಸುವಿರಿ. ನಿಮ್ಮ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಲು ಸೂಕ್ತವಾದ ಸಮಯ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅಧಿಕ ಕಮಿಶನ್ ದೊರೆಯಲಿದೆ. ಆರೋಗ್ಯ ಸ್ಥಿರವಾಗಿ ಇರುವುದು.

ಮಿಥುನ- ದೈಹಿಕವಾಗಿ ಬಲಾಡ್ಯರಾಗಿರುವ ನಿಮಗೆ ಮಾನಸಿಕವಾಗಿ ಬಹಳ ದೊಡ್ಡ ಹೊಡೆತಬೀಳುವ ಸಂಭವವಿದೆ. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳು ಏರ್ಪಡುವುದು. ರಾಜಕೀಯ ವ್ಯಕ್ತಿಗಳಿಂದ ಕಾರ್ಯ ಸಾಧಿಸಿಕೊಳ್ಳುವಿರಿ. ಬಂಧುಗಳಿಂದ ದ್ರವ್ಯಲಾಭವಾಗುವುದು.

ಕಟಕ- ಹಣಕಾಸಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಪರಿಣಿತರಿಗೆ ಶಿಕ್ಷಣ ವೃತ್ತಿ ದೊರೆಯುವ ಸಂಭವವಿದೆ. ಉನ್ನತ ಪೆÇಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿ ಕೊಳ್ಳುವಿರಿ.

ಸಿಂಹ-ನಿಮ್ಮ ಮಕ್ಕಳ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿವೆ. ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಮರೆತು ಮಕ್ಕಳನ್ನು ಅತಿಯಾಗಿ ಶಿಕ್ಷಿಸಬೇಡಿ. ವಿವಾಹ ಸಂಬಂಧದ ಮಾತುಕತೆಗಳು ಫಲಕಾರಿಯಾಗುವುದು.

ಕನ್ಯಾ- ಅಧಿಕಾರಸ್ಥರು ಹಾಗೂ ನಿಮ್ಮ ಹಿರಿಯ ನೌಕರರ ಜತೆ ನಿಮ್ಮ ಸ್ನೇಹ ಸಂಬಂಧ ಹೆಚ್ಚಾಗಿ ಬೆಳೆದು ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ನಿಮ್ಮ ಶತ್ರುಗಳ ಬಣ್ಣ ಬಯಲಾಗುವುದು ನಿಮ್ಮ ಸಂತೋಷಕ್ಕೆ ಕಾರಣವಾಗುತ್ತದೆ. ಕುಲದೇವರ ಪ್ರಾರ್ಥನೆಯು ಶುಭತರುವುದು.

ತುಲಾ- ವಿನಾ ಕಾರಣ ಪರಿಶ್ರಮದಿಂದ ಫಲ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಈ ದಿನದ ನಿಮ್ಮ ಈ ಪರಿಶ್ರಮವು ಮುಂದಿನ ದಿನಕ್ಕೆ ಅಡಿಪಾಯವಾಗಲಿದೆ. ವಂಶ ಪಾರಂಪರ್ಯವಾಗಿ ಬಂದ ನಿಮ್ಮ ಉದ್ಯೋಗದಲ್ಲಿ ಈಗ ಹೆಚ್ಚಿನ ಏಳಿಗೆ ಕಾಣುವಿರಿ.

ವೃಶ್ಚಿಕ- ಈ ದಿನ ಕೆಲವು ದುಷ್ಟ ಜನರು ನಿಮಗೆ ಸಾಕಷ್ಟು ತೊಂದರೆ ನೀಡಲು ಬಯಸುತ್ತಾರೆ. ಹಾಗೆಯೇ ಆರ್ಥಿಕವಾಗಿ ಒಂದಿಷ್ಟು ಹಣಕಾಸಿನ ಕಡೆಗೆ ಮಹತ್ವ ಸಹ ನೀಡಬೇಕು. ಈ ದಿನ ಹಿರಿಯ ವ್ಯಕ್ತಿಗಳಿಂದ ನಿಮಗೆ ಆರ್ಥಿಕ ಲಾಭ ಸಹ ಉಂಟಾಗುತ್ತದೆ.

ಧನಸ್ಸು ಆಭರಣಗಳ ಖರೀದಿ ನಡೆಸುವುದರಿಂದ ಸಂತೋಷವಾಗುವುದು. ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲ ಉಂಟಾಗುವುದು. ಕುಟುಂಬ ಅಭಿವೃದ್ಧಿಗೆ ಉತ್ತಮ ಯೋಚನೆಗಳು ನಿಮ್ಮೆಡೆಗೆ ಬರಲಿದೆ, ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ.

ಮಕರ- ನಿಮ್ಮಲ್ಲಿರುವ ಮಾತಿನ ಚತುರತೆಯಿಂದ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರುವುದು. ಪದವೀಧರರಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮವಾದ ಸ್ಥಳ ಲಭಿಸಲಿದೆ ಹಾಗು ಅಧ್ಯಯನಕ್ಕೆ ಗಣ್ಯರ ಪ್ರೋತ್ಸಾಹ ದೊರೆಯಲಿದೆ. ಶ್ರೀ ದುರ್ಗಾದೇವಿಯನ್ನು ಭಜಿಸಿ.

ಕುಂಭ-ಆಸ್ತಿ ವಿಷಯಗಳು ನಿರಾತಂಕವಾಗಿ ಬಗೆಹರಿಯುವುದು. ಮನೆಯಲ್ಲಿ ನೆಮ್ಮದಿಯ ವಾತಾವರಣ ವೃದ್ಧಿಯಾಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ತೃಪ್ತಿಕರ ಆದಾಯವಿದೆ. ಪಾಲುದಾರರಿಂದ ಉತ್ತೇಜನಕಾರಿ ಪ್ರತಿಕ್ರಿಯೆ ದೊರೆಯುವುದು. ಕಟ್ಟಡದ ಕೆಲಸಗಾರರಿಗೆ ಶುಭದಿನ.

ಮೀನ- ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಲು ರಾಜಕೀಯಧುರೀಣರ ಕೃಪಾಕಟಾಕ್ಷ ಪಡೆದುಕೊಳ್ಳುವಲ್ಲಿ ಯಶಸ್ಸನ್ನು ಹೊಂದುವಿರಿ. ಕ್ರೀಡಾಸಕ್ತರಿಗೆ ಅಥವಾ ಕ್ರೀಡಾಪಟುಗಳಿಗೆ ಇಂದು ಶುಭದಾಯಕವಾದ ದಿನ. ಕಿರುತೆರೆಯಲ್ಲಿ ಅಭಿನಯಿಸಲು ಅವಕಾಶಗಳು ಲಭಿಸುವುದು.

- Advertisement -
spot_img

Latest News

error: Content is protected !!