Saturday, April 27, 2024
Homeಜ್ಯೋತಿಷ್ಯಭಾನುವಾರ ನಿತ್ಯಭವಿಷ್ಯ: ಈ ರಾಶಿಯವರು ಇಂದು ತಾಳ್ಮೆಯಿಂದಿರುವುದು ಅಗತ್ಯ..

ಭಾನುವಾರ ನಿತ್ಯಭವಿಷ್ಯ: ಈ ರಾಶಿಯವರು ಇಂದು ತಾಳ್ಮೆಯಿಂದಿರುವುದು ಅಗತ್ಯ..

spot_img
- Advertisement -
- Advertisement -

ಮೇಷ: ಅಧಿಕವಾದ ಕೋಪ, ಪ್ರತ್ಯಕ್ಷವಾದರು ಪ್ರಮಾಣಿಸಿ ನೋಡು, ಒಪ್ಪಂದಗಳಿಗೆ ಸಹಿ ಹಾಕುವುದು ಉತ್ತಮ, ಪರೋಪಕಾರಕ್ಕೆ ಮುಂದಾಗುವಿರಿ.

ವೃಷಭ: ಧನದ ಆಕಾಂಕ್ಷೆ ಹೆಚ್ಚು, ಅಧಿಕ ಖರ್ಚು, ಆರೋಗ್ಯದ ಕಡೆ ಗಮನ ಕೊಡಿ, ಸತಿ-ಪತಿಯರಲ್ಲಿ ಕಲಹ, ಮಾತಿನ ಮೇಲೆ ನಿಗಾ ಇರಲಿ.

ಮಿಥುನ: ವಿವೇಚನೆ ಕಳೆದುಕೊಳ್ಳಬೇಡಿ, ಸಂತಾನ ಪ್ರಾಪ್ತಿ, ಉಷ್ಣ ವಾಯುವಿನಿಂದ ಅನಾರೋಗ್ಯ, ಅಧಿಕಾರ-ಪ್ರಾಪ್ತಿ, ಚಂಚಲ ಮನಸ್ಸು.

ಕಟಕ: ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಮಾತೃವಿಗೆ ಅನಾರೋಗ್ಯ, ಮಿತ್ರರಿಂದ ಅಪವಾದ, ಪರರ ಕಷ್ಟಕ್ಕೆ ಸ್ಪಂದಿಸುವಿರಿ, ಮಾತಾ-ಪಿತೃಗಳ ಸೇವೆ ಮಾಡಿ.

ಸಿಂಹ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಾನಾ ರೀತಿಯ ತೊಂದರೆ, ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ಹಿರಿಯರ ಸಲಹೆ ಪಡೆಯುವುದು ಉತ್ತಮ.

ಕನ್ಯಾ: ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ, ಪಿತ್ರಾರ್ಜಿತ ಆಸ್ತಿ ವಿವಾದ, ವಿವಾಹ ಯೋಗ, ಸಾಲ ಮಾಡುವ ಸಂಭವ.

ತುಲಾ: ಆಕಸ್ಮಿಕ ಧನಲಾಭ, ದಂತ ವೈದ್ಯರಿಗೆ ಶುಭದಿನ, ಕಿರು ಪ್ರಯಾಣದ ಸಿದ್ಧತೆ, ರೋಗ ಬಾಧೆಗಳಿಂದ ಅಧಿಕ ಖರ್ಚು.

ವೃಶ್ಚಿಕ: ಸಮ್ಮಿಶ್ರ ಫಲ, ಕುಲದೇವರ ಆರಾಧನೆಯಿಂದ ಫಲ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಸಲ್ಲದ ಅಪವಾದ, ಕೆಲಸ-ಕಾರ್ಯಗಳಲ್ಲಿ ಅಪಜಯ.

ಧನಸ್ಸು: ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು, ಶತ್ರು ನಾಶ, ಭಾಗ್ಯ ವೃದ್ಧಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಪರಸ್ಥಳ ವಾಸ, ಪುಣ್ಯಕ್ಷೇತ್ರ ದರ್ಶನ.

ಮಕರ: ಅನಿರೀಕ್ಷಿತ ಜವಾಬ್ದಾರಿಗಳು, ಉತ್ತಮ ಆದಾಯ, ಹಳೆಯ ಸಾಲ ಹಿಂತಿರುಗಿ ಬರುವ ಸಾಧ್ಯತೆ, ಅಧಿಕಾರ-ಪ್ರಾಪ್ತಿ.

ಕುಂಭ: ತಾಳ್ಮೆ ಅಗತ್ಯ, ಸ್ತ್ರೀಯರಿಗೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ, ಮಕ್ಕಳಿಂದ ನೆಮ್ಮದಿ, ಆರ್ಥಿಕ ಲಾಭ, ಕಾರ್ಯಕ್ಷೇತ್ರದಲ್ಲಿ ಸಾಧನೆ.

ಮೀನ: ಅವಸರದಲ್ಲಿ ತೀರ್ಮಾನ ತೆಗೆದುಕೊಳ್ಳಬೇಡಿ, ವ್ಯಾಪಾರದಲ್ಲಿ ನಷ್ಟ, ಸ್ನೇಹಿತರ ಮಾತಿಗೆ ಗೌರವ.

- Advertisement -
spot_img

Latest News

error: Content is protected !!