- Advertisement -
- Advertisement -
ವಿಜಿಸಿ ವಿಟ್ಲ ಕ್ರಿಕೆಟ್ ತಂಡದ ಪ್ರಧಾನ ಆಟಗಾರರಾಗಿದ್ದ, ಅನೇಕ ವರ್ಷಗಳಿಂದ ಮಂಗಳೂರಿನ ಉರ್ವ ಫ್ರೆಂಡ್ಸ್ ಇದರ ಆರಂಭಿಕ ಬ್ಯಾಟ್ಸ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ರಿಕೆಟ್ ಆಟಗಾರ ಹಾಗೂ ತೀರ್ಪುಗಾರರಾಗಿದ್ದ ವಿಟ್ಲ ರಥಗದ್ದೆಯ ಸಮೀಪದ ನಿವಾಸಿ ರಜನೀಶ್ (39) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಖ್ಯಾತ ಕ್ರೀಡಾಪಟು ಆಗಿದ್ದ ರಜನೀಶ್ ಅವರು ಕ್ರಿಕೆಟ್, ಶಟಲ್, ಬ್ಯಾಡ್ಮಿಂಟನ್, ವಾಲಿಬಾಲ್ ಹಾಗೂ ಖೋಖೋ ಆಟಗಾರರಾಗಿದ್ದರು. ಇವರು ಇತ್ತೀಚಿನ ಕೆಲ ವರ್ಷಗಳಿಂದ ತೀರ್ಪುಗಾರರಾಗಿಯೂ ಸಹ ಭಾಗವಹಿಸುತ್ತಿದ್ದರು .
- Advertisement -