ಕಾರ್ಕಳ: ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೊರೋನಾ ಸೋಂಕಿತ – ಮೃತದೇಹ ಎತ್ತಲು ಹಿಂಜರಿದ ಅಗ್ನಿಶಾಮಕ ಸಿಬ್ಬಂದಿ

ಕಾರ್ಕಳ: ನಗರದ ಮಾರ್ಕೆಟ್ ರಸ್ತೆಯ ಪರಿಸರದಲ್ಲಿ ವಾಸವಾಗಿದ್ದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬ, ಸೋಂಕಿಗೆ ಹೆದರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ.

ಮೃತರನ್ನು ವೃತ್ತಿಯಲ್ಲಿ ಫೋಟೊಗ್ರಾಫರ್ ಆಗಿರುವ ಪ್ರಸನ್ನ (45) ಎಂದು ಗುರುತಿಸಲಾಗಿದೆ.

ಪಾಸಿಟಿವ್ ವರದಿ ಕೈ ಸೇರುತ್ತಿದ್ದಂತೆ ಪ್ರಸನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಇವರ ಆತ್ಮಹತ್ಯೆ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಪೊಲೀಸರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರೂ, ಕೊರೋನಾ ಆತಂಕದಿಂದ ಶವ ಮೇಲಕ್ಕೆತ್ತಲು ಹಿಂಜರಿದರು.

ಜೊತೆಗೆ ಅವರ ಬಳಿ ಪಿಪಿಇ ಕಿಟ್ ಇರದ ಕಾರಣ ಅದು ಸಹಜವಾಗಿತ್ತು ಕೂಡಾ. ಈ ವೇಳೆ ಪಡುಬಿದ್ರಿಯ ಆಸಿಫ್ ಎಂಬುವರು ಕೊರೋನಾ ಭಯವನ್ನು ಸೈಡಿಗಿಟ್ಟು ಬಾವಿಗಿಳಿದು ಶವವನ್ನು ಮೇಲಕ್ಕೆತ್ತಿದರು.