- Advertisement -
- Advertisement -
ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಎನ್ಐಎ ತನಿಖೆ ಮುಂದುವರೆದಿದ್ದು, ಅನೇಕ ರಹಸ್ಯಗಳು ಬೆಳಕಿಗೆ ಬರುತ್ತಿವೆ.
ಹೌದು ಇದೀಗ ಶಂಕಿತ ಉಗ್ರ ಶಾರೀಕ್ಗೆ ಸಂಬಂಧಿಸಿದ, ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನೇಕ ರಹಸ್ಯಗಳಿರುವ ಪೆನ್ಡ್ರೈವ್ ಹಾಗೂ ಪಿಡಿಎಫ್ ಫೈಲ್ಗಳು ಎನ್ಐಎ ಅಧಿಕಾರಿಗಳಿಗೆ ಸಿಕ್ಕಿವೆ. ಅದರಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ರೂಪಿಸಿದ ಸಂಚಿನ ಬಗ್ಗೆಯೂ ಸಾಕ್ಷಿಗಳಿವೆ. ಅಲ್ಲದೇ ಉಗ್ರ ಶಾರೀಕ್ ಮತ್ತು ಮತೀನ್ ತಮ್ಮ ಸಹಚರರಿಗೆ ಉಗ್ರ ಕೃತ್ಯ ನಡೆಸಲು ಸೂಚನೆ ನೀಡುತ್ತಿರುವ ವೀಡಿಯೋ ಕೂಡಾ ಇದೆ ಎನ್ನಲಾಗಿದೆ.
- Advertisement -