ಬೆಂಗಳೂರು; ಆಪರೇಷನ್ ಸಿಂಧೂರ್ ವಿರುದ್ಧ ಇಡೀ ದೇಶವೇ ಗರ್ವ ಪಡುತ್ತಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ತನ್ನ ಎಕ್ಸ್ ಪೇಜ್ ನಲ್ಲಿ ಗಾಂಧಿಜೀ ಫೋಟೋ ಜೊತೆಗೆ ಮನುಕುಲದ ಶಕ್ತಿಯುತ ಅಸ್ತ್ರ ಅಂದ್ರೆ ಅದು ಶಾಂತಿ ಎಂಬ ಮಹಾತ್ಮ ಗಾಂಧಿಯ ಮಂತ್ರ ಬರೆದು ಟ್ವೀಟ್ ಮಾಡಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಟ್ವೀಟ್ ಮಾಯವಾಗಿದೆ.
ಈ ಬಗ್ಗೆ ಸಚಿವ ಭೈರತಿ ಸುರೇಶ್ ಅವರನ್ನು ನೀಡಿಯಾದವರು ಕೇಳಿದಾಗ ಅದನ್ನೆಲ್ಲಾ ಈಗ ಚರ್ಚೆ ಮಾಡುವುದು ಬೇಡ, ಬಿಡಿ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು. ಗೃಹಸಚಿವ ಹರಮೇಶ್ವರ್, ಯಾರು, ಯಾವಾಗ, ಏನಂದು ಟ್ವಿಟ್ ಮಾಡಿದ್ದಾರೋ ನನಗ ಗೊತ್ತಿಲ್ಲ ಎಂದರು. ಸಚಿವ ದಿನೇಶ್ ಗುಂಡೂರಾದ್, ನಾವು ಶಾಂತಿಪ್ರಿಯರು. ಯುದ್ಧದ ಉದ್ದೇಶ ಶಾಂತಿ ಸ್ಥಾಪನಯಾಗಿದೆ. ನಮ್ಮದು ಶಾಂತಿಯುತ ದೇಶ, ಸಂದ ಸಮಯದಲ್ಲಿ ಇಷ್ಟ ಇರಲಿ, ಇಲ್ಲದೇ ಇರಲಿ, ಎಲ್ಲರೂ ಒಟ್ಟಾಗಿರಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿಂದು ಸ್ಪಷ್ಟನೆ ನೀಡಿದ ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ, ಮಹಾತ್ಮಗಾಂಧೀಜಿಯವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷರ ವಹಿಸಿ 100 ವರ್ಷ ಕಳೆದ ಹಿನ್ನಲೆಯಲ್ಲಿ ಹಲವು ದಿನಗಳಿಂದಲೂ ಪ್ರತಿದಿನ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಒಂದೊಂದು ಸಂದೇಶ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಾಕಲಾಗುತ್ತಿತ್ತು. ಅದೇ ರೀತಿ ಇಂದು ಬೆಳಿಗ್ಗೆ ಕೂಡ ಒಂದು ಪೋಸ್ಟ್ ಹಾಕಲಾಗಿದೆ. ಅದಕ್ಕೂ ಅಪರೇಷನ್ ಸಿಂಧೂರ್ ಗೆ ಸಂಬಂಧವಿಲ್ಲ. ಇದರಲ್ಲಿ ಯಾರನ್ನೂ ಅಥವಾ ಯಾವ ಕಾರ್ಯಾಚರಣೆಯನ್ನೂ ಅಗೌರವಿಸುವ ಉದ್ದೇಶ ಇರಲಿಲ್ಲ. ಎಂದಿನಂತೆ ಹಾಕಲಾಗಿರುವ ಸಂದೇಶವನ್ನು ಬೇರೆ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದರು.
ಇದೆಲ್ಲಾ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ಪೋಸ್ಟ್ ನ್ನು ಡಿಲೀಟ್ ಮಾಡಿಸಿದೆ.