Wednesday, May 8, 2024
Homeಪ್ರಮುಖ-ಸುದ್ದಿಬೆಳ್ತಂಗಡಿ ; ಎಮ್ ಎಲ್ ಸಿ ಮಗನ ಕಾರು ಭೀಕರ ಅಪಘಾತ, ಗಂಭೀರ ಗಾಯ

ಬೆಳ್ತಂಗಡಿ ; ಎಮ್ ಎಲ್ ಸಿ ಮಗನ ಕಾರು ಭೀಕರ ಅಪಘಾತ, ಗಂಭೀರ ಗಾಯ

spot_img
- Advertisement -
- Advertisement -

ಬೆಳ್ತಂಗಡಿ : ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ಎಮ್ ಎಲ್ ಸಿ ಹರೀಶ್ ಕುಮಾರ್ ಮಗನಾದ ಮಾಜಿ ಬೆಳ್ತಂಗಡಿಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ರ ಪಜಿರೋ KA 02 MH 1717 ಕಾರು ಶನಿವಾರ ರಾತ್ರಿ ಸುಮಾರು 10:30 ರ ವೇಳೆ ತಮ್ಮ ಮಂಜೊಟ್ಟಿ ಮನೆಗೆ ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕುತ್ರೋಟ್ಟು ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ತ್ರೀ ಫೇಸ್ ಲೈನ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿ ಒಬ್ಬನೆ ಇದ್ದ ಅಭಿನಂದ್ ಹರೀಶ್ ಕುಮಾರ್ ಗೆ ಮೂಗು ಹಾಗೂ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಕಾರಿನ ಬಲಭಾಗದ ಡೋರಿನಿಂದ ಎಸೆಯಲ್ಪಟ್ಟು ಪಕ್ಕದ ತೋಡಿಗೆ ಬಿದ್ದಿದ್ದು ಇದರ ಶಬ್ದ ಕೇಳಿದ ಎದುರು ಮನೆಯ ನಿವಾಸಿ ಸಂತೋಷ್ ಹೊಳ್ಳ ಕುತ್ರೋಟ್ಟು ಅವರು ಮತ್ತು ಮನೆಮಂದಿ ಓಡಿಬಂದು ಎತ್ತಿಕೊಂಡು ಮನೆಗೆ ಕರೆದುಬಂದು ನೀರು ನೀಡಿ ಉಪಚಾರಿಸಿ ನಂತರ ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಂಗಾಡಿಯ ಅನಿಲ್ ಪೈ ಕರೆ ಮಾಡಿ ಘಟನೆಯ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಅನಿಲ್ ಪೈ ,ಇಂಟಕ್ ಅಧ್ಯಕ್ಷ ಸವಣಾಲು ನವೀನ್ ಗೌಡ , ರಾಜೇಶ್ , ಇಂದಬೆಟ್ಟು ಧನುಷ್ ಸೇರಿ ಅಭಿನಂದನ್ ಹರೀಶ್ ಕುಮಾರ್ ಅವರನ್ನು ತಮ್ಮ ಸ್ವೀಪ್ಟ್ ಕಾರಿನಲ್ಲಿ ಉಜಿರೆ ಎಸ್ ಡಿ ಎಮ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಘಟನೆ ವೇಳೆ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಆ ವೇಳೆ ತ್ರೀ ಫೇಸ್ ವಿದ್ಯುತ್ ಕಂಬದ ಲೈನ್ ಕಟ್ಟ್ ಅಗಿ ಕೆಳಗೆ ಬಿದ್ದಿದೆ ಆದ್ರೆ ಕಾರಿಗೆ ತಾಗದೆ ದೊಡ್ಡ ಅನಾಹುತ ತಪ್ಪಿದೆ.
ಪಜಿರೋ ಕಾರಿಗೆ ಸಂಪೂರ್ಣ ಹಾನಿಯಾಗಿದೆ. ಅಭಿನಂದನ್ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ಬೆಳ್ತಂಗಡಿ ಮಾಜಿ ಶಾಸಕರಾದ ಕೆ.ವಸಂತ ಬಂಗೇರ , ಬ್ಲಾಕ್ ನಗರ ಕ್ರಾಂಗೆಸ್ ಅಧ್ಯಕ್ಷ ಶೈಲೇಶ್ ಕುಮಾರ್ , ಯುವ ನಾಯಕ ಮತ್ತು ಹೈ ಕೊರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಮ್ ಮತ್ತಿತರರು ಉಜಿರೆ ಎಸ್ ಡಿ ಎಮ್ ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸಿದ್ದಾರೆ.

- Advertisement -
spot_img

Latest News

error: Content is protected !!