Sunday, April 28, 2024
Homeಕರಾವಳಿಧರ್ಮಸ್ಥಳ: ಉಜಿರೆಯ ವಿವಿಧ ಸಂಘದ ಪದಾಧಿಕಾರಿಗಳಿಂದ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಧರ್ಮಸ್ಥಳ: ಉಜಿರೆಯ ವಿವಿಧ ಸಂಘದ ಪದಾಧಿಕಾರಿಗಳಿಂದ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

spot_img
- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದು ಈ ಹಿನ್ನೆಲೆಯಲ್ಲಿ ಉಜಿರೆಯ ವಿವಿಧ ಸಂಘದ ಪದಾಧಿಕಾರಿಗಳು ಉಜಿರೆಯ ಶರತ್ ಕೃಷ್ಣ ಪಡ್ವೆಟ್ನಾಯರ ನೇತೃತ್ವದಲ್ಲಿ ಇಂದು ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅವರನ್ನು ಭೇಟಿ ಮಾಡಿ ಫಲಪುಷ್ಪವನ್ನು ನೀಡಿ ಗೌರವಿಸಿದ್ರು.

ಉಜಿರೆ ವರ್ತಕರ ಸಂಘದ ಪದಾಧಿಕಾರಿಗಳು, ಉಜಿರೆ ಮಹಿಳಾ‌ ಮಂಡಲದ ಅಧ್ಯಕ್ಷರಾದ ಜಯಶ್ರೀ ಗೌಡ ಅಪ್ರಮೇಯ ಮತ್ತು ಸದಸ್ಯರು,ಉಜಿರೆ ಗ್ಯಾರೇಜ್ ಮಾಲಕರ ಸಂಘದ ಪದಾಧಿಕಾರಿಗಳು, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ.ಆರ್.ಶೆಟ್ಟಿ , ಪಿಡಿಓ ಪ್ರಕಾಶ್ ಶೆಟ್ಟಿ ನೋಚ್ಚ ಮತ್ತು ಸಿಬ್ಬಂದಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಲಕ್ಷ್ಮೀ ಗ್ರೂಪ್ಸ್ ಮಾಲೀಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲೀಕ ರಾಜೇಶ್‌.ಪೈ ಹಾಗೂ ಸದಸ್ಯರು ,ಸುರಕ್ಷಾ ಮೆಡಿಕಲ್ ಮಾಲೀಕ ಶ್ರೀಧರ್.ಕೆ.ವಿ, ದಿಶಾ ಹೊಟೇಲ್ ಮಾಲೀಕ ಅರುಣ್ ಕುಮಾರ್ , ಇಂಡಿಯಾನ್ ಆರ್ಥ್ ಮೂವರ್ಸ್  ಮಾಲಕ ರಾಘವೇಂದ್ರ ಬೈಪಾಡಿತ್ತಾಯ,ಅಮೃತ್ ಟೆಕ್ಸ್ ಟೈಲ್ ಮಾಲಕ ಪ್ರಶಾಂತ್ ಜೈನ್, ಜೆಸಿಐ ಅಧ್ಯಕ್ಷರಾದ ಪ್ರಸಾದ್ ,ಭಾರತ್ ಐರನ್ ವರ್ಕ್ಸ್ ಮಾಲೀಕರು, ಮಹಾವೀರ ಗ್ರೂಪ್ಸ್ ಮಾಲೀಕ ಪ್ರಭಾಕರ ಹೆಗ್ಡೆ ಜಯಂತ್ ಶೆಟ್ಟಿ ಕುಂಟಿನಿ ,ಶ್ರೀಧರ್ ಮರಕ್ಕಡ, ಉಜಿರೆ ಉದ್ಯಮಿ ಮೋಹನ್ ಶೆಟ್ಟಿಗಾರ್,

ಎಮ್.ಶಶಿಧರ್ ಕಲ್ಮಂಜ ,ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಎಮ್.ಶ್ರೀಧರ್ ಕಲ್ಮಂಜ,ಪ್ರಕಾಶ್ ಗೌಡ ಅಪ್ರಮೇಯ, ಮಹಾಲಕ್ಷ್ಮಿ ಸ್ಟೋರ್ ಮಾಲೀಕ ಭರತ್ ಕುಮಾರ್, ವೆಂಕಟರಮಣ ಹೆಬ್ಬಾರ್ ಉಜಿರೆ, ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!