Thursday, May 2, 2024
Homeಕರಾವಳಿಉಡುಪಿಕೋಟೇಶ್ವರ ಜಾತ್ರೆಯಲ್ಲಿ ಮೈ ಕೈ ತಾಗಿದ್ದಕ್ಕೆ ಯುವಕರ ನಡುವೆ ಹೊಡೆದಾಟ !

ಕೋಟೇಶ್ವರ ಜಾತ್ರೆಯಲ್ಲಿ ಮೈ ಕೈ ತಾಗಿದ್ದಕ್ಕೆ ಯುವಕರ ನಡುವೆ ಹೊಡೆದಾಟ !

spot_img
- Advertisement -
- Advertisement -

ವಿಶ್ವ ವಿಖ್ಯಾತ ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಜಾತ್ರೆಯಲ್ಲಿ ವ್ಯಕ್ತಿಗಳು ಹೊಡೆದಾಡಿಕೊಂಡಿದ್ದಾರೆ. ನಡೆದುಕೊಂಡು ಹೋಗುವಾಗ ಮೈ ಕೈ ತಾಗಿದ್ದಕ್ಕೆ ಘರ್ಷಣೆ ಉಂಟಾಗಿದೆ. ಈ ಘಟನೆ ಕೋಟೇಶ್ವರ ರಥಬೀದಿಯಲ್ಲಿರುವ ನಂಬಿಯಾರ್ ಜಂಕ್ಷನ್ ಬಳಿ ನಡೆದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಕೋಟೆಯ ಆಶೀಶ್ ಶ್ರೀಯಾನ್, ಹಂದಾಡಿಯ ಪ್ರೀತಮ್, ಕುಂಬ್ರಿಯ ಸಂದೀಪ ಇವರನ್ನು ಈಗಾಗಲೇ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಮೈ ಕೈ ತಾಗಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿ ಸಾರ್ವಜನಿಕರ ನೆಮ್ಮದಿಗೆ ತೊಂದರೆಯಾಗುವಂತೆ ಮಾಡಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!