- Advertisement -
- Advertisement -
ವಿಶ್ವ ವಿಖ್ಯಾತ ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಜಾತ್ರೆಯಲ್ಲಿ ವ್ಯಕ್ತಿಗಳು ಹೊಡೆದಾಡಿಕೊಂಡಿದ್ದಾರೆ. ನಡೆದುಕೊಂಡು ಹೋಗುವಾಗ ಮೈ ಕೈ ತಾಗಿದ್ದಕ್ಕೆ ಘರ್ಷಣೆ ಉಂಟಾಗಿದೆ. ಈ ಘಟನೆ ಕೋಟೇಶ್ವರ ರಥಬೀದಿಯಲ್ಲಿರುವ ನಂಬಿಯಾರ್ ಜಂಕ್ಷನ್ ಬಳಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಕೋಟೆಯ ಆಶೀಶ್ ಶ್ರೀಯಾನ್, ಹಂದಾಡಿಯ ಪ್ರೀತಮ್, ಕುಂಬ್ರಿಯ ಸಂದೀಪ ಇವರನ್ನು ಈಗಾಗಲೇ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಮೈ ಕೈ ತಾಗಿದ್ದಕ್ಕೆ ಸಾರ್ವಜನಿಕ ಸ್ಥಳದಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿ ಸಾರ್ವಜನಿಕರ ನೆಮ್ಮದಿಗೆ ತೊಂದರೆಯಾಗುವಂತೆ ಮಾಡಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -