Friday, June 27, 2025
Homeಕರಾವಳಿಉಡುಪಿಪರ್ಕಳ: ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ !

ಪರ್ಕಳ: ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ !

spot_img
- Advertisement -
- Advertisement -

ಉಡುಪಿ: ಎಂಜಿಎಂ ಕಾಲೇಜ್ ಪ್ರಥಮ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಪರ್ಕಳ ದೇವಿನಗರದ ನಿವಾಸಿ, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಧಾರಾವಾಡ ಜಿಲ್ಲೆಯ ಕುಂದಗೋಳ್ ನಿವಾಸಿಯಾಗಿರುವ ಸರಸ್ವತಿ ( 16 ). ಧಾರಾವಾಡ ಮೂಲದ ವಿದ್ಯಾರ್ಥಿನಿ ತಂದೆ ತಾಯಿಯರೊಂದಿಗೆ ಪರ್ಕಳದ ದೇವಿನಗರದಲ್ಲಿ ವಾಸಿಸುತ್ತಿದ್ದರು. ಸರಸ್ವತಿ ಉಡುಪಿ ಎಂಜಿಎಂ ಕಾಲೇಜಿನ ಪಿಯು ವ್ಯಾಸಂಗ ಮಾಡುತ್ತಿದ್ದರು .

ಇವರ ತಂದೆ – ತಾಯಿ ಕಟ್ಟಿಗೆ ಮಿಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು , ನಿನ್ನೆ ತಂದೆ , ತಾಯಿ ಕೆಲಸಕ್ಕೆ ತೆರಳಿದ ವೇಳೆ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ . ಈ ಬಗ್ಗೆ ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!