- Advertisement -
- Advertisement -
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ, 1 ಲಕ್ಷ ಮೀನುಗಾರರ ಕುಟುಂಬದ ಮಕ್ಕಳಿಗೆ ಸ್ಕಾಲರ್ಶಿಪ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಸ್ಕಾಲರ್ಶಿಪ್ ಘೋಷಣೆ ಮಾಡಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಳನಾಡು ಮೀನುಗಾರಿಕೆಗೆ ಬಹಳ ಪ್ರಾಮುಖ್ಯತೆ ಇದೆ. ಸಮುದ್ರ ಮೀನಿನ ಕೃಷಿಗೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. 100 ಹೊಸ ಡೀಫ್ ಸೀ ಫಿಶಿಂಗ್ ಬೋಟ್ ಕೊಡುತ್ತಿದ್ದೇವೆ. 1,600 ಕೆರೆಗಳಲ್ಲಿ ಮೀನು ಉತ್ಪಾದನೆ ಮಾಡುವ ಗುರಿ ಇದೆ. ಈ ಹಿಂದೆ 300 ಮೀನುಗಾರರ ಸಂಘಕ್ಕೆ ನೆರವು ನೀಡಲಾಗಿತ್ತು. ಈಗ ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ ವಿಸ್ತರಣೆ ಮಾಡಲಾಗಿದೆ. 3 ಲಕ್ಷದಿಂದ 5 ಲಕ್ಷದವರೆಗೂ ಸರ್ಕಾರ ಸಹಾಯಧನ ನೀಡಲಿದೆ. ಆರ್ಥಿಕವಾಗಿ ಮೀನುಗಾರರು ಸಬಲರಾಗಬೇಕು ಎಂದರು.
- Advertisement -