- Advertisement -
- Advertisement -
ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರುದ್ಧ ಹೋರಾಡುತ್ತಿರುವವರ ಮನೆಗೆ ರಾತ್ರೋರಾತ್ರಿ ಪೊಲೀಸರು ತೆರಳಿ ನೋಟಿಸ್ ನೀಡಿದ ಘಟನೆ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಇದು ನನ್ನ ಗಮನಕ್ಕೆ ಬಂದಿಲ್ಲ. ನಡುರಾತ್ರಿ ಪೊಲೀಸರು ಹೋರಾಟಗಾರರ ಮನೆಗೆ ತೆರಳಿ ನೋಟಿಸ್ ನೀಡಿದ್ರೆ ಅದು ಸರಿಯಲ್ಲ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟೋಲ್ ತೆರವು ಕಾರ್ಯ ವಿಳಂಬವಾಗಿದೆ. ಆದ್ರೆ ಈ ವಿಚಾರವಾಗಿ ಮಾತುಕತೆ ನಡೆದಿದೆ. ಇನ್ನು ಟೋಲ್ ತೆರವು ಹೋರಾಟಕ್ಕೆ ನಮ್ಮ ವಿರೋಧವೂ ಇಲ್ಲ ಎಂದಿದ್ದಾರೆ.
- Advertisement -