- Advertisement -
- Advertisement -
ಮುಲ್ಕಿ: ಅಪಾಯಕಾರಿಯಾಗಿರುವ ಪಾಳುಬಿದ್ದ ಬಾವಿಯನ್ನ ತೆರವುಗೊಳಿಸಬೇಕು ಅಂತ ಸ್ಥಳೀಯರು ಆಗ್ರಹಿಸಿರುವ ಘಟನೆ ಮುಲ್ಕಿ ವಿಜಯ ಕಾಲೇಜು ಕಕ್ವ ಮಟ್ಟು ಸಂಪರ್ಕ ರಸ್ತೆಯ ಬಾಳೆಹಿತ್ಲು ಬಳಿ ನಡೆದಿದೆ.
ಸಾವಿರಾರು ವಾಹನಗಳು ಓಡಾಟ ನಡೆಸುತ್ತಿರುವ ಈ ರಸ್ತೆ ಅಂಚಿನಲ್ಲಿ ಬಾವಿ ಇದ್ದು ಬಾವಿಯ ಮೇಲ್ಗಡೆ ಮುಚ್ಚಲಾಗಿದೆ. ಆದರೆ ಬಾವಿ ಬದಿಯಲ್ಲಿ ಅಳವಡಿಸಿದ್ದ ರಕ್ಷಣಾ ಕವಚಗಳು ಕಿತ್ತು ಹೋಗಿದ್ದು ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಕಳೆದ ಕೆಲವು ತಿಂಗಳ ಹಿಂದೆ ಈ ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಹಿತ ಅನೇಕ ಘನ ವಾಹನಗಳ ಓಡಾಟದಿಂದ ರಸ್ತೆ ತೀರಾ ಕೆಟ್ಟುಹೋಗಿದ್ದು ಮುಂದಿನ ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಕುಸಿತದ ಭೀತಿ ಎದುರಾಗಿದೆ. ಕೂಡಲೇ ನಗರ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಪಾಯಕಾರಿ ಬಾವಿಗೆ ಸೂಕ್ತ ತಡೆ ಬೇಲಿ ನಿರ್ಮಿಸಿ ಅನಾಹುತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- Advertisement -