Friday, May 3, 2024
Homeತಾಜಾ ಸುದ್ದಿಮುಲ್ಕಿ: ಪಾಳುಬಿದ್ದ ಬಾವಿ ತೆರವುಗೊಳಿಸಿ, ಅನಾಹುತ ತಪ್ಪಿಸಿ: ಬಾಳೆಹಿತ್ಲುವಿನಲ್ಲಿ ಸ್ಥಳೀಯರ ಆಗ್ರಹ

ಮುಲ್ಕಿ: ಪಾಳುಬಿದ್ದ ಬಾವಿ ತೆರವುಗೊಳಿಸಿ, ಅನಾಹುತ ತಪ್ಪಿಸಿ: ಬಾಳೆಹಿತ್ಲುವಿನಲ್ಲಿ ಸ್ಥಳೀಯರ ಆಗ್ರಹ

spot_img
- Advertisement -
- Advertisement -

ಮುಲ್ಕಿ: ಅಪಾಯಕಾರಿಯಾಗಿರುವ ಪಾಳುಬಿದ್ದ ಬಾವಿಯನ್ನ ತೆರವುಗೊಳಿಸಬೇಕು ಅಂತ ಸ್ಥಳೀಯರು ಆಗ್ರಹಿಸಿರುವ ಘಟನೆ ಮುಲ್ಕಿ ವಿಜಯ ಕಾಲೇಜು ಕಕ್ವ ಮಟ್ಟು ಸಂಪರ್ಕ ರಸ್ತೆಯ ಬಾಳೆಹಿತ್ಲು ಬಳಿ ನಡೆದಿದೆ.

ಸಾವಿರಾರು ವಾಹನಗಳು ಓಡಾಟ ನಡೆಸುತ್ತಿರುವ ಈ ರಸ್ತೆ ಅಂಚಿನಲ್ಲಿ ಬಾವಿ ಇದ್ದು  ಬಾವಿಯ ಮೇಲ್ಗಡೆ ಮುಚ್ಚಲಾಗಿದೆ. ಆದರೆ ಬಾವಿ ಬದಿಯಲ್ಲಿ ಅಳವಡಿಸಿದ್ದ ರಕ್ಷಣಾ ಕವಚಗಳು ಕಿತ್ತು ಹೋಗಿದ್ದು ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಕಳೆದ ಕೆಲವು ತಿಂಗಳ ಹಿಂದೆ ಈ ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಹಿತ ಅನೇಕ ಘನ ವಾಹನಗಳ ಓಡಾಟದಿಂದ ರಸ್ತೆ ತೀರಾ ಕೆಟ್ಟುಹೋಗಿದ್ದು ಮುಂದಿನ ಮಳೆಗಾಲದಲ್ಲಿ ರಸ್ತೆ ಮತ್ತಷ್ಟು ಕುಸಿತದ ಭೀತಿ ಎದುರಾಗಿದೆ. ಕೂಡಲೇ ನಗರ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಪಾಯಕಾರಿ ಬಾವಿಗೆ ಸೂಕ್ತ ತಡೆ ಬೇಲಿ ನಿರ್ಮಿಸಿ ಅನಾಹುತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!