- Advertisement -
- Advertisement -
ಆಂಧ್ರಪ್ರದೇಶ: ಇಲ್ಲಿನ ಕೃಷ್ಣಾ ಜಿಲ್ಲೆಯ ಎ. ಕಂಡೂರು ಬಳಿ ರೆಪುಡಿ ತಾಂಡಾದಲ್ಲಿ ಇಬ್ಬರು ಮಕ್ಕಳು ಕಾರ್ ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲು ಲಾಕ್ ಆದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತಪಟ್ಟ ಮಕ್ಕಳನ್ನು 5 ವರ್ಷದ ಶ್ರೀನಿವಾಸ್ ಮತ್ತು 4 ವರ್ಷದ ಯಮುನಾ ಎಂದು ಗುರುತಿಸಲಾಗಿದೆ. ತಮ್ಮ ಮನೆ ಬಳಿ ಇದ್ದ ಕಾರ್ ನಲ್ಲಿ ಆಟವಾಡುವ ವೇಳೆ ಡೋರ್ ಲಾಕ್ ಆಗಿದ್ದು ಮಕ್ಕಳಿಗೆ ತಿಳಿದಿಲ್ಲ. ಮಕ್ಕಳು ಉಸಿರುಗಟ್ಟಿ, ಹೊರಬರಲು ಸಾಧ್ಯವಾಗದೆಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
- Advertisement -