Tuesday, April 30, 2024
Homeತಾಜಾ ಸುದ್ದಿಪೋಷಕರೇ ಎಚ್ಚರ: ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ 1 ವರ್ಷದ ಮಗು ಸಾವು

ಪೋಷಕರೇ ಎಚ್ಚರ: ವೀಳ್ಯದೆಲೆ ತಟ್ಟೆಯಲ್ಲಿದ್ದ ಅಡಿಕೆ ನುಂಗಿ 1 ವರ್ಷದ ಮಗು ಸಾವು

spot_img
- Advertisement -
- Advertisement -

ಶಿವಮೊಗ್ಗ: ಆಟವಾಡುತ್ತಿದ್ದಾಗ ಮನೆಯಲ್ಲಿ ವೀಳ್ಯದೆಲೆ ಹಾಕುವ ಬಟ್ಟಲಿನಲ್ಲಿದ್ದ ಅಡಿಕೆ ನುಂಗಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮದಲ್ಲಿ ನಡೆದಿದೆ. ಅಡಿಕೆ ನುಂಗಿ ಅರ್ಚನಾ ಮತ್ತು ಸಂದೇಶ್ ದಂಪತಿಯ ಹದಿಮೂರು ತಿಂಗಳ ಮಗು ಶ್ರೀಹಾನ್ ಸಾವನ್ನಪ್ಪಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಅದೆ ರಸ್ತೆಯಲ್ಲಿ ಸಂಚಾರಿಸುತಿದ್ದ ಆರೋಗ್ಯ ಸಹಾಯಕಿ ಲಕ್ಮೀ ಎಂಬುವರು ಗಮನಿಸಿ ಅ ಮಗುವನ್ನು ಕೂಡಲೇ ಹತ್ತಿರದ ಕಾಟಗಾರು ಆಸ್ಪತ್ರೆಗೆ ರವಾನಿಸಲು ತಿಳಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸ್ಥಳೀಯ ವಾಹನದಲ್ಲಿ ರವಾನಿಸಿದ್ದಾರೆ. ದಾರಿ ಮಧ್ಯೆ ವಾಹನದಿಂದ ಸ್ಥಳಂತರಿಸಿ ಅಂಬುಲೈಸ್ ಮುಖಾಂತರ ಜೆಸಿ ಆಸ್ಪತ್ರೆಗೆ ಕರೆತಂದರಾದರು ಮಗು ಚಿಕಿತ್ಸೆ ಪಲಕಾರಿಯಾಗದೆ ಅಸುನಿಗಿದೆ.

ನಿಶಾನ್ ತಂದೆ ಸಂದೇಶ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಕಾರಣ ಹೆದ್ದೂರಿಗೆ ಬಂದು ಇಲ್ಲಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಸದ್ಯದಲ್ಲೇ ಪುನಃ ಬೆಂಗಳೂರಿಗೆ ತೆರಳಲು ಸಜ್ಜಾಗುತ್ತಿದ್ದರು.

ಇತ್ತೀಚೆಗೆ ಆರೋಗ್ಯ ಇಲಾಖೆ ಏರ್ಪಡಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ನಿಶಾನ್ ಗೆ ಉತ್ತಮ ಆರೋಗ್ಯವಂತ ಮಗು ಎಂದು ಗುರುತಿಸಿ ಪ್ರಥಮ ಬಹುಮಾನದ ಜೊತೆಗೆ ನಗದು ಪುರಸ್ಕಾರ ಕೂಡ ನೀಡಲಾಗಿತ್ತು.

- Advertisement -
spot_img

Latest News

error: Content is protected !!