- Advertisement -
- Advertisement -
ಮಂಗಳೂರು: ವಾಟ್ಸಾಪ್ ಮೂಲಕ ದ.ಕ ಡಿಸಿ ಡಾ.ರಾಜೇಂದ್ರ ಅವರ ಹೆಸರು ಹಾಗೂ ಫೋಟೋ ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮೊ.ಸಂ: 8590710748ರ ವಾಟ್ಸಾಪ್ನಲ್ಲಿ ಈ ರೀತಿ ವಂಚನೆ ಎಸಲಾಗಿದೆ. ಇನ್ನು ತನ್ನ ಹೆಸರು ಹಾಗೂ ಫೋಟೊವನ್ನು ಈ ಸಂಖ್ಯೆಯಲ್ಲಿ ದುರ್ಬಳಕೆ ಮಾಡಲಾಗಿದೆ. ಅಪರಿಚಿತರು ಈ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಸಹಾಯ ಅಥವಾ ಹಣವನ್ನು ವರ್ಗಾಯಿಸಲು ವಿನಂತಿಸಬಹುದು. ಆ ನಂಬರ್ ನನ್ನದ್ದಲ್ಲ. ಹಾಗಾಗಿ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ಗೆ ವರ್ಗಾಯಿಸದಂತೆ ಡಿಸಿ ರಾಜೇಂದ್ರ ಕೆ.ವಿ. ಮನವಿ ಮಾಡಿದ್ದಾರೆ. 8590710748 ಈ ನಂಬರ್ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
- Advertisement -