- Advertisement -
- Advertisement -
ಕುಂದಾಪುರ: ಕೊರ್ಗಿಯ ಕೊರವಡಿಮನೆ ಎಂಬಲ್ಲಿ ಚಿನ್ನಾಭರಣ ಕಳವು ಮಾಡಿ ನಕಲಿ ಚಿನ್ನ ಇಟ್ಟು ಮನೆ ಕೆಲಸದಾಕೆ ಮಾಲೀಕರಿಗೆ ವಂಚಿಸಿರುವ ಘಟನೆ ನಡೆದಿದೆ.
ಈ ಬಗ್ಗೆ ಮನೆ ಮಾಲಕಿ ಭವಾನಿ ಶೆಡ್ತಿ ಅವರು ಪೊಲೀಸರಿಗೆ ದೂರು ನೀಡಿದ್ದು , ಭವಾನಿ ಶೆಡ್ತಿ ಅವರ ಮನೆಯಲ್ಲಿ ಸುಮಾರು 2 ತಿಂಗಳಿನಿಂದ ಮನೆಕೆಲಸ ಮಾಡಿಕೊಂಡಿದ್ದ ಶಾಂತಕುಮಾರಿ ಯಾನೆ ಎಂಬಾಕೆಯು ಭವಾನಿ ಶೆಡ್ಡಿ ಅವರು ಮನೆಯಲ್ಲಿ ಇಟ್ಟಿದ್ದ ಕಪಾಟಿನ ಕೀ ಬಳಸಿ ಗೋದ್ರೆಜ್ ಕಪಾಟಿನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಸರವನ್ನು ಕಳವು ಮಾಡಿದ್ದಾಳೆ.
ಹಾಗೇ ಕಳವು ಮಾಡಿದ ಆವರಣವನ್ನು ಹೋಲುವ ನಕಲಿ ಆಭರಣಗಳನ್ನು ಅದೇ ಸ್ಥಳದಲ್ಲಿ ಇಟ್ಟು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಾಗಿದೆ . ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -