- Advertisement -
- Advertisement -
ಹಿರಿಯಡ್ಕ: ಪೆರ್ಡೂರಿನಲ್ಲಿ ಮಾರಾಟದ ಕೋಳಿ ಖರೀದಿ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆಯಿಂದ 1,20,000 ರೂ ಮೌಲ್ಯದ ಕರಿಮಣಿ ಸರ ದೂಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಶೋಭಾ ಅವರು ತಮ್ಮ ಮನೆಯಲ್ಲಿ ಇದ್ದ ವೇಳೆ , ಬೈಕಿನಲ್ಲಿ ಬಂದ ವ್ಯಕ್ತಿ ಒಬ್ಬ ಮಾರಾಟದ ಕೋಳಿ ಇದೆಯೇ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಶೋಭಾ ಅವರು ಇಲ್ಲ ಎಂದಾಗ ಆತ ಅಕ್ಕ ಪಕ್ಕದ ಮನೆಯಲ್ಲಿ ಇದೇ ರೀತಿ ಹೋಗಿ ಕೇಳಿದ್ದಾನೆ.
ಆ ಬಳಿಕ ಶೋಭಾ ಅವರ ಮನೆಯ ಪಕ್ಕದ ಮರದಲ್ಲಿ ಹಣ್ಣು ಕೀಳುತ್ತಿದ್ದ ಆತನಿಗೆ ಹಣ್ಣು ತುಂಬಿಸಲು ಚೀಲ ಬೇಕಿತ್ತು. ಈ ವೇಳೆ ಶೋಭಾ ಅವರು ಚೀಲ ನೀಡುತ್ತಿದ್ದಾಗ ಆತ ಶೋಭಾ ಅವರ ಕುತ್ತಿಗೆಯಿಂದ ಕರಿಮಣಿ ಸರ ದೋಚಿ ಪರಾರಿಯಾಗಿದ್ದಾನೆ .
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -