- Advertisement -
- Advertisement -
ಮಣಿಪಾಲದ ಬಡಗುಬೆಟ್ಟುವಿನ ರಾಜೀವ ನಗರದಲ್ಲಿ ಹಣ ಕೇಳಿಕೊಂಡು ಬಂದ ಪರಿಚಿತ ವ್ಯಕ್ತಿಯೇ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಹಾಗೂ ಹವಳದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ .
ರಾಜೀವ ನಗರದ ನಳಿನಿ ರಾವ್ ಅವರು ತಮ್ಮ ಮನೆಯಲ್ಲಿ ಇದ್ದ ವೇಳೆ ಅವರ ಪರಿಚಯದ ದಿವಾಕರ ಪೂಜಾರಿ ಎಂಬಾತ ಬೈಕ್ನಲ್ಲಿ ಬಂದು , ಹಣ ಬೇಕು ಸ್ವಲ್ಪ ಎಂದು ಕೇಳಿದ್ದಾನೆ .
ಈ ವೇಳೆ ನಳಿನಿ ಅವರು ತನ್ನ ಬಳಿ ಹಣವಿಲ್ಲ ತನ್ನ ಔಷಧಕ್ಕೆ ಹಣ ಖರ್ಚಾಗಿದೆ ಎಂದು ತಿಳಿಸಿದ್ದು , ಆಗ ದಿವಾಕರ ಪೂಜಾರಿ ನಳಿನಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರ ಹಾಗೂ ಹವಳದ ಸರವನ್ನು ಎಳೆದುಕೊಂಡು ಸುಲಿಗೆ ನಡೆಸಿ ಪರಾರಿಯಾಗಿದ್ದಾನೆ .
ಚಿನ್ನಾಭರಣದ ಮೌಲ್ಯ 3,50,000 ಆಗಿರಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
- Advertisement -