Tuesday, April 23, 2024
Homeಕರಾವಳಿಬೆಳ್ತಂಗಡಿ: ಶತಾಯುಷಿ ಪಿಲಿಕಲ ಲೋಕಮ್ಮ ನಿಧನ

ಬೆಳ್ತಂಗಡಿ: ಶತಾಯುಷಿ ಪಿಲಿಕಲ ಲೋಕಮ್ಮ ನಿಧನ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಪಿಲಿಕಲ ಲೋಕಮ್ಮ (106) ಇವರು ಇಂದುತಮ್ಮ ಸ್ವಗೃಹದಲ್ಲಿ ನಿಧನರಾದರು.

ಶತಾಯುಷಿಯಾಗಿದ್ದ ಇವರು ಮಕ್ಕಳಾದ ಅಣ್ಣಿ ಮಲೆಕುಡಿಯ, ಮಹಾಬಲ ಮಲೆಕುಡಿಯ, ಧರ್ಮಣ ಮಲೆಕುಡಿಯ, ಕೂಸಮ್ಮ , ಕಮಲ , ಲಲಿತಾ , ಚಿನ್ನಮ್ಮ , ರತ್ನ , ಗಿರಿಜಾ ಮತ್ತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯರಾದ ಜಯಾನಂದ ಪಿಲಿಕಲ ಸೇರಿದಂತೆ 31 ಮೊಮ್ಮಕ್ಕಳು , 38 ಮರಿಮೊಮ್ಮಕ್ಕಳು ಸೇರಿದಂತೆ ಅಪಾರ ಪ್ರಮಾಣದ ಬಂಧುಬಳಗವನ್ನು ಅಗಲಿದ್ದಾರೆ.

ಮೃತರ ಮನೆಗೆ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ , ನ್ಯಾಯವಾದಿ ಶಿವಕುಮಾರ್ ಎಸ್. ಎಂ , ಎಪಿಎಂಸಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಆಲಂಗಾಯಿ , ತಾ.ಪಂ ಸದಸ್ಯೆ ಜಯಶೀಲ , ಕಾಂಗ್ರೆಸ್ ಮುಖಂಡರಾದ ಸುರೇಶ್ ಕುಮಾರ್ ಕೊರಂತೊಟ್ಟು , ಕಿರಣ್ ಕುಮಾರ್ ಗೌಡ, ರಾಜೇಶ್ ಭಟ್, ಚಂದ್ರಶೇಖರ್, ಗೋಪಾಲ್ ಗೌಡ, ಗಣೇಶ್ ಗೌಡ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಹ ಸಂಚಾಲಕ ಎಸ್. ವೈ ಗುರುಶಾಂತ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!