- Advertisement -
- Advertisement -
ಬೆಂಗಳೂರು: ನಿನ್ನೆ ಎಸ್ ಐ ಟಿ ವಿಚಾರಣೆಗೆ ಹಾಜರಾಗಿದ್ದ ಸಿಡಿ ಲೇಡಿ ನನ್ನನ್ನು ನರೇಶ್ ಹಾಗೂ ಶ್ರವಣ್ ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ದಾರೆ ಅಂತಾ ಹೇಳಿದ್ದಾಳೆ ಅನ್ನೋ ಸುದ್ದಿ ಹರಿದಾಡಿತ್ತು. ಇದಾದ ಬಳಿಕ ಆಕೆಯ ಪರ ವಕೀಲರಾದ ಮಂಜುನಾಥ್ ಆಕೆ ರೀತಿ ಹೇಳಿಲ್ಲ ಅಂತಾ ಸ್ಪಷ್ಟನೆಯನ್ನು ಕೊಟ್ಟಿದ್ದರು. ಇದಾದ ಬೆನ್ನಲ್ಲೇ ಇದೀಗ ಯುವತಿ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾಳೆ.
ವಿಡಿಯೋದಲ್ಲಿ ನಿನ್ನೆ ಕೆಲ ಮಾಧ್ಯಮಗಳಲ್ಲಿ ಬಂದ ವರದಿ ಸತ್ಯಕ್ಕೆ ದೂರ.ನಾನು 164 ಹೇಳಿಕೆಗೆ ಬದ್ದಳಾಗಿದ್ದೇನೆ.ಒತ್ತಡದಿಂದ ಹೇಳಿಕೆ ಕೊಟ್ಟಿದ್ದೆ ಅನ್ನೋದು ಸತ್ಯಕ್ಕೆ ದೂರವಾದದ್ದು.ನಾನು ಕೊಟ್ಟ ದೂರಿನ ಸಂಬಂಧ ಕೆಲ ಮಾಹಿತಿ ಒದಗಿಸಲು ಬಂದಿದ್ದೆ. ಅದಕ್ಕಾಗಿ ಸಮಯವಾಕಾಶ ಕೇಳಿ ಹೋಗಿದ್ದೆ. ಎಸ್ಐಟಿ ರಮೇಶ್ ರ ವಿಚಾರಣೆಗೆ ಕರೆಯದಿರುವ ಬಗ್ಗೆ ದೂರು ನೀಡಿದ್ದೇನೆ. ಅವರು ಕೊರೊನಾ ಪೀಡಿತರಂತೆ ನಟಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ರಮೇಶ್ ಜಾರಕಿಹೊಳಿ ವಿರುದ್ದ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
- Advertisement -