Saturday, May 18, 2024
Homeಅಪರಾಧಮಂಗಳೂರು:ಕೋಣಕ್ಕೆ ಗುಂಡಿಕ್ಕಿ ಕತ್ತು ಸೀಳಿದ ಪ್ರಕರಣ; ಏಳು ಮಂದಿಯ ಬಂಧನ

ಮಂಗಳೂರು:ಕೋಣಕ್ಕೆ ಗುಂಡಿಕ್ಕಿ ಕತ್ತು ಸೀಳಿದ ಪ್ರಕರಣ; ಏಳು ಮಂದಿಯ ಬಂಧನ

spot_img
- Advertisement -
- Advertisement -

ಮಂಗಳೂರು: ನಗರದ ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಯ ಎಂಬಲ್ಲಿ ಜಮೀನಿಗೆ ನುಗ್ಗಿದ ಕೋಣವನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೋಟೆಕಾರ್ ನಿವಾಸಿ ಜಯರಾಮ್ ರೈ (58), ಮಲ್ಲೂರ್ ನಿವಾಸಿ ಉಮರ್ (37), ಕೋಟೆಕಾರ್ ನಿವಾಸಿ ಉಮರ್ ಫಾರೂಕ್ (42), ದೇರಳಕಟ್ಟೆಯ ಮೊಹಮ್ಮದ್ ಸುಹೇಲ್ (26), ಸೋಮೇಶ್ವರದ ಮೊಹಮ್ಮದ್ ಕಲಂಧರ್ (43), ಮಲ್ಲೂರಿನ ಮೊಹಮ್ಮದ್ ಸಿನಾನ್ (22) ಮತ್ತು ಸೋಮೇಶ್ವರದ ಇಲ್ಯಾಸ್ (38) ) ಬಂಧಿತ ಆರೋಪಿಗಳು.

ಪ್ರಮುಖ ಆರೋಪಿ ಜಯರಾಮ್ ರೈ ಅವರ ತೋಟವನ್ನು ಕೋಣ ನಾಶ ಮಾಡುತ್ತಿದ್ದ ಕಾರಣ ಎರಡು ಮೂರು ಬಾರಿ ಕೋಣವನ್ನು ಹಿಡಿಯಲು ವಿಫಲವಾಗಿದ್ದ. ಹೀಗಾಗಿ ಕೊಡಗಿನ ವ್ಯಕ್ತಿಯನ್ನು ಸಂಪರ್ಕಿಸಿ ಎಸ್ಬಿಬಿಎಲ್ ಗನ್ ಖರೀದಿಸಿ ಇತರರ ಸಹಾಯದಿಂದ ಅದರ ಮೇಲೆ ಎರಡು ಗುಂಡು ಹಾರಿಸಿದ್ದಾರೆ. ಬಳಿಕ ಮಾಂಸ ಮಾಡಿ ಮಾರುವ ಉದ್ದೇಶದಿಂದ ಕುತ್ತಿಗೆಯನ್ನು ಕತ್ತರಿಸಿದ್ದಾರೆ. ಆದರೆ ಗುಂಡಿನ ಸದ್ದು ಕೇಳಿ ಸ್ಥಳೀಯರು ಧಾವಿಸಿ ಬಂದ ಕಾರಣ ಆರೋಪಿಗಳು ಪರಾರಿಯಾಗಿದ್ದರು.ಘಟನೆ ಬಳಿಕ ತೋಟದ ಮಾಲೀಕನ ಕೈವಾಡ ಇದೆ ಎಂದು ಹಿಂದೂ ಸಂಘಟನೆ ಆರೋಪಿಸಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.

ಬಂಧಿತರಿಂದ ಒಂದು ನಾಲ್ಕು ಚಕ್ರ ವಾಹನ, ಒಂದು ಸ್ಕೂಟರ್, ಎಸ್ ಬಿಬಿ ಎಲ್ ಗನ್, ಮಾರಕಾಸ್ತ್ರಗಳು, ಜೀವಂತ ಗುಂಡುಗಳು, ಹಗ್ಗ, ಮರದ ದಿಮ್ಮಿಯನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!