ರಾಮಕುಂಜ: ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಶೆಡ್ ಒಂದರಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಅಂಬ ಎಂಬಲ್ಲಿ ಕೋಳಿ ಫಾರ್ಮ್ ವೊಂದರ ಪಕ್ಕದಲ್ಲಿದ್ದ ಶೆಡ್ ನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಹಣವನ್ನು ಪಣಕ್ಕಿಟ್ಟು ಜುಗಾರಿ ಆಟ ಆಡುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ನಗದು ವಶಪಡಿಸಿಕೊಳ್ಳಲಾಗಿದೆ. ಕೊಯಿಲ ಗ್ರಾಮದ ಗೋಳಿತ್ತಡಿ ನಿವಾಸಿ ಸತೀಶ್ ಪೂಜಾರಿ, ಹಿರೆಬಂಡಾಡಿ ಗ್ರಾಮದ ಕಾಚೀಲದ ಪ್ರಮೋದ್, ಕೊಯಿಲ ಗ್ರಾಮದ ಅಂಬಾ ಮನೆಯ ದರ್ಶನ್, ಬಂಟ್ವಾಳದ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಅರುಣ್ ಪ್ರಸಾದ್, ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಸುನಿಲ್ ಆಟದಲ್ಲಿ ನಿರತರಾಗಿ ಬಂಧಿತರಾದವರು.
ಕೊಯಿಲದಲ್ಲಿ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕಡಬ ಠಾಣೆ ಯ ಎಸ್.ಐ.ರುಕ್ಮ ನಾಯ್ಕ್ ಹಾಗು ಹೆಚ್.ಸಿ. ಹರೀಶ್ ಪಿ.ಸಿ.ಶ್ರೀಶೈಲ, ಭವಿತ್, ಎಎಸ್ಐ ಚಂದ್ರಶೇಖರ್ , ಹೊಯ್ಸಲದ ಶಿವರಾಜ್ ಮತ್ತು ಕುಮಾರ್, ಹೋಂ ಗಾರ್ಡ್ ರತೀಶ್ ಅವರು ಮಧ್ಯರಾತ್ರಿ ದಾಳಿ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಹರೀಶ್ ಗೌಡ, ಕೊಯಿಲ ಗ್ರಾಮದ ಅಂಬಾ ಮನೆಯ ಸಂಜೀವ ಪೂಜಾರಿ, ರಾಮಕುಂಜ ಗ್ರಾಮದ ಶಾರದಾನಗರ ನಿವಾಸಿ ಶಿಯಾಬ್, ಕೊಯಿಲ ಗ್ರಾಮದ ಒ.ಕೆ ಮನೆಯ ಅಚ್ಚು, ಬಂಟ್ವಾಳ ತಾಲೂಕಿನ ಪೆರ್ವಾಯಿ ಗ್ರಾಮದ ಬದಿಯರು ವಸಂತ ಶೆಟ್ಟಿ ಸೇರಿದಂತೆ ಹಲವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಯ ವೇಳೆ ಆಟಕ್ಕೆ ಬಳಸಿದ ರೂ. 8940 ನಗದು ಹಾಗೂ ಇಸ್ಪೀಟೆಲೆಗಳು ಅಲ್ಲದೆ ಸ್ಥಳದಲ್ಲಿದ್ದ ಎರಡು ಆಟೋರಿಕ್ಷಾ ಮತ್ತು ಮೋಟರ್ ಸೈಕಲ್ ನ್ನು ವಶಪಡಿಸಿ ಕೊಳ್ಳಲಾಗಿದೆ