- Advertisement -
- Advertisement -
ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಎಂದು ಅರೆಸ್ಟ್ ಆಗಿದ್ದ ಸಿ ಟಿ ರವಿ ಅವರಿಗೆ ನಿನ್ನೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ ನಾನು ಹೇಳಿದಂತೆ ಸತ್ಯಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
ನನ್ನ ಕಷ್ಟದ ಸಂದರ್ಭದಲ್ಲಿ ನನಗೆ ಬೆನ್ನೆಲುಬಾಗಿ ನಿಂತ ರಾಜ್ಯದ ಹಾಗೂ ರಾಷ್ಟ್ರದ ಬಿಜೆಪಿ ನಾಯಕರಿಗೆ ಧನ್ಯವಾದಗಳು ಎಂದಿದ್ದಾರೆ. ನಾನು ಕಷ್ಟ ಬಂದಾಗ ಕುಗ್ಗುವುದಿಲ್ಲ ಹಾಗೇ ಈ ರೀತಿ ಕೆಟ್ಟ ಸಂದರ್ಭ ಬಂದಾಗಲೂ ಕುಗ್ಗುವುದಿಲ್ಲ ಎಂದಿದ್ದಾರೆ.
ಹಲ್ಲೆ ಮಾಡಿದವರ ಮೇಲೆ ನಾನು ದೂರು ಕೊಟ್ಟಿದ್ದೇನೆ. ಆದರೆ ದೂರು ದಾಖಲಾಗಿಲ್ಲ .ಹಾಗಾದರೆ ನ್ಯಾಯ ಎಲ್ಲಿದೆ ಮುಖ್ಯಮಂತ್ರಿಗಳೇ ಎಂದು ಸಿ ಟಿ ರವಿ ಪ್ರಶ್ನೆ ಮಾಡಿದ್ದಾರೆ.
- Advertisement -