- Advertisement -
- Advertisement -
ಉಡುಪಿ: ಕಾಲು ಜಾರಿ ನಿರ್ಮಾಣ ಹಂತದ ಬಾವಿಗೆ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡಾ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 38 ವರ್ಷದ ಲಕ್ಷ್ಮಣ್ ಪೂಜಾರಿ ಎಂದು ಗುರುತಿಸಲಾಗಿದೆ. ಕುಂದಾಪುರ ತಾಲ್ಲೂಕಿನ ಕರ್ಕುಂಜೆ ಗ್ರಾಮದ ಶೆಟ್ರಕಟ್ಟೆ ಎಂಬಲ್ಲಿ ಬಾವಿ ಕೆಲಸ ಮಾಡುವಾಗ ಬಂದ ಭಾರಿ ಮಳೆಯ ಕಾರಣ ಬಾವಿ ಕುಸಿದಿದ್ದು, ಸ್ಥಳದಲ್ಲೇ ಇದ್ದ ಲಕ್ಷ್ಮಣ್ ಪೂಜಾರಿ ಕಾಲು ಜಾರಿ ಈ ದುರ್ಘಟನೆ ಸಂಭವಿಸಿದೆ.
- Advertisement -