Friday, May 17, 2024
Homeಕರಾವಳಿಉಡುಪಿಹೆಬ್ರಿ: ಕೊಲೆ ಮಾಡಿ ಬಾವಿಗೆ ಎಸೆದ, ಅಣ್ಣನಿಂದಲೇ ತಮ್ಮನ ಕೊಲೆ ಶಂಕೆ !

ಹೆಬ್ರಿ: ಕೊಲೆ ಮಾಡಿ ಬಾವಿಗೆ ಎಸೆದ, ಅಣ್ಣನಿಂದಲೇ ತಮ್ಮನ ಕೊಲೆ ಶಂಕೆ !

spot_img
- Advertisement -
- Advertisement -

ಹೆಬ್ರಿ: ರವಿರಾಜ ಶೆಟ್ಟಿಗಾರ ಎಂಬವರು ಶಿವಪುರದ ಕಾಳಾಯಿ ಮುಳ್ಳುಗುಡ್ಡೆ ಎಂಬಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಮೃತರ ಅಣ್ಣ ಜಯರಾಮ ಶೆಟ್ಟಿಗಾರ ಅವರು ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮೃತರ ತಲೆಯ ಹಿಂಬದಿ ರಕ್ತಗಾಯ ಇರುವುದರಿಂದ ಇವರ ಮರಣದಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

ಮೃತ ದೇಹದ ಶವ ತನಿಖೆಯ ಸಮಯದಲ್ಲಿ ಮೃತ ದೇಹದ ಮೈ ಮೇಲಿರುವ ಗಾಯಗಳನ್ನು ಪರಿಶೀಲಿಸಿದಾಗ ಮೃತನ ಹಿಂದಲೆಯಲ್ಲಿ ಹರಿತವಾದ ಆಯುಧದಿಂದ ಬಲವಾಗಿ ಕಡಿತದ ಗಾಯಗಳು ಕಂಡು ಬಂದಿದೆ ಹಾಗೂ ಶವ ತನಿಖಾ ಕಾಲದಲ್ಲಿ ಹಾಜರಿದ್ದ ಪಂಚಾಯತುದಾರರು ಕೂಡಾ ಹರಿತವಾದ ಆಯಧದಿಂದ ಬಲವಾಗಿ ಕಡಿದು , ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

ಮೃತನ ಅಣ್ಣ ಶಂಕರನಾರಾಯಣ ಶೆಟ್ಟಿಗಾರ ಹಾಗೂ ಮೃತರಿಗೆ ಮನೆಯ ಬಳಿ ಇರುವ ಕೋಣೆಯ ಮಾಡನ್ನು ಕಿತ್ತು ಹಾಕಿರುವ ವಿಚಾರದಲ್ಲಿ ಕೋಪವಿದ್ದು ಇದ್ದು ಇದೇ ಕಾರಣದಿಂದ ಶಂಕರನಾರಾಯಣ ಶೆಟ್ಟಿಗಾರನು ರವಿರಾಜ ಶೆಟ್ಟಿಗಾರನನ್ನು ಕೊಲೆ ಮಾಡಿರುವ ಬಗ್ಗೆ ಸಂಶಯವಿರುತ್ತದೆ ಎಂಬುದಾಗಿ ದೂರು ನೀಡಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!