Wednesday, May 1, 2024
Homeಕರಾವಳಿಉಪ್ಪಿನಂಗಡಿ: ತಂಗಿ ಹಾಗೂ ಬಾವನ ಮಧ್ಯೆ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ

ಉಪ್ಪಿನಂಗಡಿ: ತಂಗಿ ಹಾಗೂ ಬಾವನ ಮಧ್ಯೆ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ

spot_img
- Advertisement -
- Advertisement -

ಉಪ್ಪಿನಂಗಡಿ: ತಂಗಿ ಹಾಗೂ ಬಾವನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ವೇಳೆ ಬಾವ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಬಗ್ಗೆ ವ್ಯಕ್ತಿಯೊಬ್ಬರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಡಬ ತಾಲೂಕು ಕೊಕ್ಕಡ ಬೋಳದಬೈಲು ನಿವಾಸಿ ಮಹಮ್ಮದ್ ಶರೀಫ್ ಹಲ್ಲೆಗೊಳಗಾದವರು. ಮಹಮ್ಮದ್ ಶರೀಫ್ ಅವರ ತಾಯಿ ಶರೀಫ್‌  ಅವರಿಗೆ ಕರೆ ಮಾಡಿ ತಂಗಿ ಮತ್ತು ಆಕೆಯ ಪತಿ ನಡುವೆ ಗಲಾಟೆ ನಡೆಯುತ್ತಿದೆ ಎಂದು ತಿಳಿಸಿದಂತೆ ಶರೀಫ್‌ರವರು ಕೂಡಲೇ ತಾಯಿ ಮನೆಗೆ ಹೋಗಿ ವಿಚಾರಿಸಿ ಬಳಿಕ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿರುವ ತಂಗಿ ಮನೆಗೆ ಹೋಗಿ ವಿಚಾರಿಸುತ್ತಿದ್ದಾಗ, ಅವರ ಬಾವ ಅಜೀಜ್ ಅವಾಚ್ಯ ಶಬ್ದಗಳಿಂದ ಬೈದು ಕೊಲ್ಲುವ ಉದ್ದೇಶದಿಂದ ಕುತ್ತಿಗೆ ಕಡಿಯಲು ತಲವಾರು ಬೀಸಿದ್ದಾರೆ.

ಇದರಿಂದ ಶರೀಫ್‌ರವರು ತಪ್ಪಿಸಿಕೊಂಡಿದ್ದು, ಹಲ್ಲೆಯಿಂದ ಅವರ ಎಡಕೈ ಅಂಗೈಯ ಮೂಳೆ ಮುರಿತವಾಗಿದೆ. ನೆಲಕ್ಕೆ ಬಿದ್ದಾಗ ತಲೆಗೂ ಗುದ್ದಿದ ಗಾಯವಾಗಿದ್ದು ಶರೀಫ್‌ರವರು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಮಹಮ್ಮದ್ ಶರೀಫ್ ಅವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!