Saturday, May 18, 2024
Homeಮನರಂಜನೆಬಾಲಿವುಡ್ ಗೆ ಮತ್ತೊಂದು ಆಘಾತ, ಖ್ಯಾತ ನಿರ್ದೇಶಕ ಇನ್ನು ನೆನಪು ಮಾತ್ರ

ಬಾಲಿವುಡ್ ಗೆ ಮತ್ತೊಂದು ಆಘಾತ, ಖ್ಯಾತ ನಿರ್ದೇಶಕ ಇನ್ನು ನೆನಪು ಮಾತ್ರ

spot_img
- Advertisement -
- Advertisement -

ಮುಂಬೈ: “ದೃಶ್ಯಂ” ಮತ್ತು “ಮದಾರಿ” ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ನಿಶಿಕಾಂತ್ ಕಾಮತ್ ಅವರು ಇಂದು ಸಂಜೆ 04:24 ಕ್ಕೆ ಹೈದರಾಬಾದ್‌ನಲ್ಲಿ ನಿಧನರಾಗಿದ್ದಾರೆ.

ಅವರು ಕಳೆದ ಎರಡು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು ಎಂದು ಅವರು ಚಿಕಿತ್ಸೆ ಪಡೆಯತ್ತಿದ್ದ ಎಐಜಿ ಆಸ್ಪತ್ರೆಗಳು ವರದಿ ಮಾಡಿವೆ.

ಇನ್ನು ನಿಶಿಕಾಂತ್ ಕಾಮತ್ ನಿಧನಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

2015 ರಲ್ಲಿ ಅಜಯ್ ದೇವ್‌ಗನ್ ಮತ್ತು ಟಬು ಅಭಿನಯದ ಮಲಯಾಳಂ ಹಿಟ್ ದೃಶ್ಯಂ ಚಿತ್ರದ ಹಿಂದಿ ರಿಮೇಕ್ ಅನ್ನು ಅವರು ನಿರ್ದೇಶಿಸಿದಾಗ ಸಿನಿಮಾ ಸಾಕಷ್ಟು ಗಮನಸೆಳೆಯಿತು. ಅವರು ಫೋರ್ಸ್, ರಾಕಿ ಹ್ಯಾಂಡ್ಸಮ್ ಮತ್ತು ಮದಾರಿ ನಿರ್ದೇಶಿಸಿದ್ದಾರೆ.ರಾಕಿ ಹ್ಯಾಂಡ್ಸಮ್, ಜೂಲಿ 2, ಭಾವೇಶ್ ಜೋಶಿ ಮತ್ತು ಸಾಚ್ಯಾ ಆತ್ ಘರತ್ (ಮರಾಠಿ) ಚಿತ್ರಗಳಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!