Sunday, May 19, 2024
Homeತಾಜಾ ಸುದ್ದಿಚರಂಡಿಗೆ ಸೈಕಲ್ ಬಿದ್ದು ಬಾಲಕ‌ ಸಾವು

ಚರಂಡಿಗೆ ಸೈಕಲ್ ಬಿದ್ದು ಬಾಲಕ‌ ಸಾವು

spot_img
- Advertisement -
- Advertisement -

ಕೇರಳ: ಭಾರೀ ಮಳೆಯಲ್ಲಿ  ಹರಿಯುವ ಚರಂಡಿಗೆ ಸೈಕಲ್‌ ಬಿದ್ದು‌ ಬಾಲಕ‌ ಬಿದ್ದು ಸಾವನ್ನಪ್ಪಿರುವ ಘಟನೆ   ಕೇರಳದ‌ ಕಲ್ಲಿಕೋಟೆಯಲ್ಲಿ ನಡೆದಿದೆ‌.

ಚೆರುವನ್ನೂರಿನ ಮುಹಮ್ಮದ್ ಮಿರ್ಶಾದ್ (13) ಮೃತ ಬಾಲಕ.
ಬಾಲಕ ಸೈಕಲ್ ನಲ್ಲಿ ತೆರಳುವಾಗ ಸೈಕಲ್ ಆಕಸ್ಮಿಕವಾಗಿ ಮನೆಯ ಬಳಿ ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದಿದೆ. ಬಾಲಕ ಕಾಣೆಯಾದಾಗ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಘಟನೆ ಮನೆಯ ಸಮೀಪದ ಸಿಸಿಟಿವಿಯಲ್ಲಿ ಬಾಲಕ ಚರಂಡಿಗೆ ಬೀಳುವ ದೃಶ್ಯ ಸೆರೆಯಾಗಿದೆ.

ಬಳಿಕ ಬಾಲಕನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

- Advertisement -
spot_img

Latest News

error: Content is protected !!