Monday, May 13, 2024
Homeಕರಾವಳಿಉಡುಪಿಬೈಂದೂರು: ನೀರಿನ ಹೊಂಡಕ್ಕೆ ಕಾಲುಜಾರಿ ಬಿದ್ದು ಬಾಲಕ ಮೃತ್ಯು

ಬೈಂದೂರು: ನೀರಿನ ಹೊಂಡಕ್ಕೆ ಕಾಲುಜಾರಿ ಬಿದ್ದು ಬಾಲಕ ಮೃತ್ಯು

spot_img
- Advertisement -
- Advertisement -

ಬೈಂದೂರು: 7 ವರ್ಷದ ಬಾಲಕ ನೀರಿನ ಹೊಂಡಕ್ಕೆ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಎಂಬಲ್ಲಿ ನಡೆದಿದೆ.

ಸುರೇಶ್ ಬಹುದೋರು ಎಂಬವರ ಮಗ ಅನಿಲ್ (7) ಮೃತಪಟ್ಟ ಬಾಲಕ. ಬಟ್ಟೆ ತೊಳೆಯಲು ಅನಿಲ್‌ ತಾಯಿ ಹೊಳೆಗೆ ಹೋಗಿದ್ದು ಈ ಸಂದರ್ಭ ಅನಿಲ್‌ ಕೂಡಾ  ತಾಯಿಯೊಂದಿಗೆ ಹೊಳೆಗೆ ಹೋಗಿದ್ದಾನೆ. ಆದರೆ ತಾಯಿ ವಾಪಾಸ್‌ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ವಾಪಾಸ್‌ ಹೋಗುವಾಗ ಹೊಳೆಯ ಸಮೀಪ ಚಿಕ್ಕ ನೀರಿನ ಗುಂಡಿಗೆ ಬಿದ್ದು ಮುಳುಗಿ ಬಾಲಕ ಮೃತಪಟ್ಟಿದ್ದಾನೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!