- Advertisement -
- Advertisement -
ಬೈಂದೂರು: 7 ವರ್ಷದ ಬಾಲಕ ನೀರಿನ ಹೊಂಡಕ್ಕೆ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಎಂಬಲ್ಲಿ ನಡೆದಿದೆ.
ಸುರೇಶ್ ಬಹುದೋರು ಎಂಬವರ ಮಗ ಅನಿಲ್ (7) ಮೃತಪಟ್ಟ ಬಾಲಕ. ಬಟ್ಟೆ ತೊಳೆಯಲು ಅನಿಲ್ ತಾಯಿ ಹೊಳೆಗೆ ಹೋಗಿದ್ದು ಈ ಸಂದರ್ಭ ಅನಿಲ್ ಕೂಡಾ ತಾಯಿಯೊಂದಿಗೆ ಹೊಳೆಗೆ ಹೋಗಿದ್ದಾನೆ. ಆದರೆ ತಾಯಿ ವಾಪಾಸ್ ಮನೆಗೆ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ವಾಪಾಸ್ ಹೋಗುವಾಗ ಹೊಳೆಯ ಸಮೀಪ ಚಿಕ್ಕ ನೀರಿನ ಗುಂಡಿಗೆ ಬಿದ್ದು ಮುಳುಗಿ ಬಾಲಕ ಮೃತಪಟ್ಟಿದ್ದಾನೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -