- Advertisement -
- Advertisement -
ನವದೆಹಲಿ: ಈಗಾಗಲೇ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದೆ. ಬಾಕಿ ಉಳಿದ 12 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳ ಮೂರನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
ಸೇಡಂ ಕ್ಷೇತ್ರಕ್ಕೆ ರಾಜ್ ಕುಮಾರ್ ಪಾಟೀಲ್, ಕೊಪ್ಪಳ್ಳ ಕ್ಷೇತ್ರಕ್ಕೆ ಮಂಜುಳಾ ಅಮರೇಶ್, ರೋಣಾ – ಕಲಕಪ್ಪ ಬಂಡಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಮಹೇಶ್ ಟೆಂಗಿನಕಾಟಿ, ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರಕ್ಕೆ ಬಿ ರಾಮಣ್ಣ ಟಿಕೆಟ್ ನೀಡಲಾಗಿದೆ.
ಇನ್ನೂ ಹೆಬ್ಬಾಳಕ್ಕೆ ಕಟ್ಟಾ ಜಗದೀಶ್, ಗೋವಿಂದರಾಜನಗರ ಕ್ಷೇತ್ರಕ್ಕೆ ಉಮೇಶ್ ಶೆಟ್ಟಿ, ಮಹದೇವ ಪುರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಮಂಜುಳ ಅರವಿಂದ ಲಿಂಬಾವಳಿ ಹಾಗೂ ಕೃಷ್ಣರಾಜನಗರಕ್ಕೆ ಶ್ರೀವತ್ಸಗೆ ಟಿಕೆಟ್ ನೀಡಲಾಗಿದೆ.
- Advertisement -