- Advertisement -
- Advertisement -
ಕಡಬ: ಇಲ್ಲಿನ ಬಿಳಿನೆಲೆ ಕಿದು ಸಿಪಿಸಿಆರ್’ಐ ಸಂಸ್ಥೆಯ ತೋಟದ ಕೆರೆಯಲ್ಲಿ ಮೊಸಳೆಯೊಂದು ಕಂಡುಬಂದಿದೆ. ಈ ಮೊಸಳೆಯನ್ನು ಅರಣ್ಯ ಇಲಾಖೆ ವತಿಯಿಂದ ಸೆರೆ ಹಿಡಿದು ಸ್ಥಳಾಂತರಿಸಿದ್ದಾರೆ.
ಹಲವು ಸಮಯಗಳಿಂದ ಅಲ್ಲಿನ ಕೆರೆಯಲ್ಲಿ ಮೊಸಳೆ ಇರುವ ಬಗ್ಗೆ ಹಾಗೂ ಸಮಸ್ಯೆ ಉಂಟಾಗುವ ಹಿನ್ನಲೆಯಲ್ಲಿ ಸ್ಥಳಾಂತರಿಸಲು ಅರಣ್ಯ ಇಲಾಖೆಗೆ ಸಿಪಿಸಿ ಆರ್ ಐ ಸಂಸ್ಥೆ ಮಾಹಿತಿ ನೀಡಿದ್ದರು. ಅದಂತೆ ಅರಣ್ಯ ಇಲಾಖೆ ಅವರು ಕೆರೆಯ ಬಳಿ ಎರಡು ದಿನಗಳ ಹಿಂದೆ ಬೋನು ಇಟ್ಟಿದ್ದರು.
ಇದೀಗ ಮೊಸಳೆ ಬೋನಿಗೆ ಬಿದ್ದಿದ್ದು , ಅಧಿಕಾರಿಗಳು ಬೋನಿನಲ್ಲಿದ್ದ ಮೊಸಳೆಯನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅರಣ್ಯ ಇಲಾಖೆಯ ಎಸಿಎಫ್ ಪ್ರವಿಣ್ ಶೆಟ್ಟಿ , ಆರ್.ಎಫ್.ಒ. ರಾಘವೇಂದ್ರ ಎಚ್.ಪಿ. , ಅರಣ್ಯ ಇಲಾಖೆ ಸಿಬ್ಬಂದಿಗಳು , ಸಿಪಿಸಿಆರ್’ಐ ಸಂಸ್ಥೆ ಸಿಬ್ಬಂದಿಗಳು ಕಾರ್ಯಚರಣೆ ವೇಳೆ ಹಾಜರಿದ್ದರು.
- Advertisement -