Saturday, April 20, 2024
Homeಕರಾವಳಿಬೆಳ್ತಂಗಡಿ: ತೋಟತ್ತಾಡಿ ರಿಕ್ಷಾ ಚಾಲಕನ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆ

ಬೆಳ್ತಂಗಡಿ: ತೋಟತ್ತಾಡಿ ರಿಕ್ಷಾ ಚಾಲಕನ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ: ತೋಟತ್ತಾಡಿಯ ಇಲ್ಲಿನ ಅಗರಿ ರಿಕ್ಷಾ ಚಾಲಕ ಹಾಗೂ ಮಾಲಕ ಗಂಗಯ್ಯ ಗೌಡ (65.ವ) ರವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಎ.3ರಂದು ಬೆಳಕಿಗೆ ಬಂದಿದೆ.

ತೋಟತ್ತಾಡಿಯ ಕಂಚರಿಕಂಡ ಎಂಬಲ್ಲಿಯ ಚರಂಡಿಯೊಂದರಲ್ಲಿ ಇವರ ಮೃತದೇಹ ನಗ್ನ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಕೊಲೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ನೆಲದ ಮೇಲೆ ಲುಂಗಿಯನ್ನು ಹಾಸಿ ಅದರ ಮೇಲೆ ಮಲಗಿರುವ ಸ್ಥಿತಿಯಲ್ಲಿ ಇವರ ಮೃತದೇಹದ ಕಂಡುಬಂದಿದ್ದು, ಶವದ ಸುತ್ತಲೂ ಕೆಂಪು ಇರುವೆ ಮುತ್ತಿಕೊಂಡಿದೆ ಹಾಗೂ ಶವದ ಪಕ್ಕದಲ್ಲಿಯೇ ಅವರ ಮೊಬೈಲ್ ಫೋನ್ ಕಂಡುಬಂದಿದ್ದು, ಇವರ ಅಟೋ ರಿಕ್ಷಾ ಸುಮಾರು ಒಂದು ಫರ್ಲಾಂಗು ದೂರದಲ್ಲಿದೆ. ಈ ಘಟನೆ ನಡೆದು ಒಂದು ದಿನ ಕಳೆದಿರಬಹುದು ನಡೆದಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಆರ್ಥಿಕವಾಗಿ ಸ್ಥಿತಿವಂತಾಗಿರುವ ಗಂಗಯ್ಯ ಗೌಡ ರವರನ್ನು ಯಾರೋ ಹಣದ ಆಸೆಗೆ ಕೊಲೆ ಮಾಡಿರಬಹುದೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಸ್ಥಳೀಯರು ಈಗಾಗಲೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!