Saturday, April 20, 2024
Homeಕರಾವಳಿಬೆಳ್ತಂಗಡಿ: ನಾಪತ್ತೆಯಾಗಿದ್ದ ಯುವಕ ಇಂದು ಕೆರೆಯಲ್ಲಿ ಶವವಾಗಿ ಪತ್ತೆ

ಬೆಳ್ತಂಗಡಿ: ನಾಪತ್ತೆಯಾಗಿದ್ದ ಯುವಕ ಇಂದು ಕೆರೆಯಲ್ಲಿ ಶವವಾಗಿ ಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ: ಖಾಸಗಿ ಸಂಸ್ಥೆಯೊಂದರಲ್ಲಿ ಮೇನೇಜರ್ ಆಗಿ ಚನ್ನರಾಯಪಟ್ಟಣದಲ್ಲಿ 9 ದಿನಗಳ ಹಿಂದೆಯಷ್ಷೇ ಕೆಲಸಕ್ಕೆ ಸೇರಿದ್ದು ನಂತರ ಏಕಾಏಕಿ ನಾಪತ್ತೆಯಾದ ಯುವಕನ ಶವ ಇಂದು ತನ್ನ ಮನೆಯ ಸಮೀಪ ಕೆರೆಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ನಾವೂರು ಗ್ರಾಮದ ನಾಗಜೆ ನಿವಾಸಿ ದಿ। ಶೀನಪ್ಪ ಗೌಡ ಎಂಬವರ ಪುತ್ರ ಎಂಬ ರಕ್ಷಿತ್ (28) ಮೃತ ಯುವಕ.

ಈ ಹಿಂದೆ ಚಿಕ್ಕಮಗಳೂರಿನಲ್ಲಿ ಇವರು ಉದ್ಯೋಗದಲ್ಲಿದ್ದರು. ನಂತರ ಇದೆ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಭಡ್ತಿ ಪಡೆದು ಚೆನ್ನರಾಯನಪಟ್ಟಣಕ್ಕೆ ವರ್ಗವಾಗಿದ್ದರು. ಇವರು 9 ದಿನಗಳ ಹಿಂದೆಯಷ್ಷೇ ಚೆನ್ನರಾಯಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರಿದ್ದು, ಕಳೆದ ಆ.22ರಂದು ಶನಿವಾರ ಮನೆಗೆ ‘ಶ್ರಾವಣ ಶನಿವಾರ’ ಆಚರಣೆಗಾಗಿ ಬಂದಿದ್ದರು. ನಂತರ ಆ. 24ರಂದು ಕೆಲಸಕ್ಕೆ ತೆರಳಿದ್ದರು. ನಿನ್ನೆಯಿಂದ ಅವರ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ನಾವೂರು ಗ್ರಾಮ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಣೇಶ್ ಗೌಡ ಹಾಗೂ ಮನೆಯಯವರು ಅವರನ್ನು ಹುಡುಕಿಕೊಂಡು ಚನ್ನರಾಯಪಟ್ಟಣಕ್ಕೆ ತೆರಳಿದ್ದರು. ಈ ನಡುವೆ ಅವರ ಬೈಕ್ ಮನೆಯ ಕಾಡಿನ ಬಳಿ ಪತ್ತೆ ಯಾಗಿದ್ಧು, ಹುಡುಕಾಟಕ್ಕೆ ಹೋದವರು ಹಿಂತಿರುಗಿ ಬಂದಿದ್ದರು.

ಇಂದು ಬೆಳಿಗ್ಗೆ ಹತ್ತಿರದ ಸಂಜೀವ ಗೌಡ ಕೋಡಿ ಎಂಬವರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ವಿಷಯದ ಬಾಟಲಿ ಪತ್ತೆಯಾಗಿದ್ಧು, ಅವರು ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ಇರಬಹುದೆಂದು ಶಂಕಿಸಲಾಗಿದೆ. ಮೃತರು ತಾಯಿ ,ಇಬ್ಬರು ಸಹೋದರರನ್ನು ಅಗಲಿದ್ದಾರೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -
spot_img

Latest News

error: Content is protected !!