- Advertisement -
- Advertisement -
ಬೆಳ್ತಂಗಡಿ : ನಗರ ಪಂಚಾಯತ್ ಬೆಳ್ತಂಗಡಿ ಮುಖ್ಯಾಧಿಕಾರಿಯಾಗಿದ್ದ ಎಮ್.ಹೆಚ್.ಸುಧಾಕರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊಸ ಮುಖ್ಯಾಧಿಕಾರಿಯಾಗಿ ಮೂಡಬಿದಿರೆಯಲ್ಲಿದ್ದ ಆರೋಗ್ಯ ನಿರೀಕ್ಷಕರಾಗಿದ್ದ ರಾಜೇಶ್ ಕೋಟ್ಯಾನ್ ಇವರನ್ನು ಬೆಳ್ತಂಗಡಿ ನಗರ ಪಂಚಾಯತ್ ಮುಖ್ಯಾಧಿಕಾರಿಯಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಬೆಳ್ತಂಗಡಿ ಮುಖ್ಯಾಧಿಕಾರಿಯಾಗಿದ್ದ ಎಮ್.ಹೆಚ್.ಸುಧಾಕರ್ ಅವರನ್ನು ಸುಳ್ಯ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. ಮೂಲತಃ ಬೆಳ್ತಂಗಡಿ ತಾಲೂಕಿನ ಉಜಿರೆ ಶಿವಾಜಿನಗರದ ನಿವಾಸಿಯಾಗಿದ್ದ ಸುಧಾಕರ್ ಪುತ್ತೂರು ತಾಲೂಕಿನಲ್ಲಿ ಸ್ವತಃ ಮನೆ ಮಾಡಿದ್ದಾರೆ. ರಾಜೇಶ್ ಕೋಟ್ಯಾನ್ ಮೂಲತಃ ಮಂಗಳೂರು ನಿವಾಸಿಯಾಗಿದ್ದು ಮೂಡಬಿದಿರೆಯಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದರು.
- Advertisement -