ಬೆಳ್ತಂಗಡಿ:ಇಲ್ಲಿನ ಮಲವಂತಿಗೆ ಗ್ರಾಮದ ಹೊಳೆಕೆರೆ ಎಂಬಲ್ಲಿ ನೀರಿನ ಪೈಪ್ ಹಾಕುವ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.ಆನಂದ ಗೌಡ ಎಂಬವರು ಹಲ್ಲೆಗೊಳಗಾದ ವ್ಯಕ್ತಿ.ಇವರು ಮಲವಂತಿಗೆ ಗ್ರಾಮದ ಹೊಳೆಕೆರೆಯಲ್ಲಿ ರಸ್ತೆಯ ಬದಿಯಲ್ಲಿ ಅಳವಡಿಸಿದ ನೀರಿನ ಪೈಪನ್ನು ಮಣ್ಣಿನ ಒಳಗೆ ಹಾಕಲು ಪ್ರಯತ್ನಿಸಿದಾಗ ಆಕ್ಷೇಪಿಸಿದ್ದಕ್ಕೆ ತುಳು ಬಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹಾರೆಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಲ್ಲಿ ಆನಂದ ಗೌಡ ಅವರ ಎಡ ಕೈ ಅಂಗೈಗೆ , ಬಲ ಕೈ ಮೊಣ ಗಂಟಿನ ಕೆಳಗೆ ಹಾಗೂ ಬಲ ಕಣ್ಣಿನ ಕೆಳಗೆ ಸೀಳಿದ ಹಾಗೂ ರಕ್ತ ಗಾಯಗಳಾಗಿವೆ. ಹಲ್ಲೆ ವಿಷಯವಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಅಲ್ಲದೆ ಹಲ್ಲೆ ಮಾಡಿರುವ ಮೋಹನ ಯಾನೆ ಜಯಂತ ಗೌಡ,ಚಂದಪ್ಪ ಗೌಡ, ದಿನೇಶ್ ಗೌಡ ಆನಂದ ಗೌಡರಿಗೆ ಜೀವ ಬೆದರಿಕೆ ಒಡ್ಡಿರುವುದಲ್ಲದೆ ಅಂಗಿಯನ್ನು ಹಿಡಿದು ಎಳೆದಾಡಿ ಕಾಲಿನಿಂದ ತುಳಿದು ಕೈಯಿಂದ ಹಲ್ಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.