ಬಂಟ್ವಾಳ; ಅಪಪ್ರಚಾರದಲ್ಲಿ ಮುಳುಗಿರುವ , ಜನರನ್ನು ತಪ್ಪು ದಾರಿಯಲ್ಲಿ ಹೋಗುವಂತೆ ಮಾಡುವ ಕಾಂಗ್ರೇಸ್ ಪಕ್ಷವನ್ನು ಶಾಶ್ವತವಾಗಿ ಬಂಟ್ವಾಳದಿಂದ ತೊಲಗಿಸಿ ಎಂದು ಕಾರ್ಯಕರ್ತರಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಮನವಿ ಮಾಡಿದರು.
ಅವರು ಕನ್ಯಾನ ಶಕ್ತಿ ಕೇಂದ್ರದ ಯಶವಂತ ಗೌಡ ಮರಾಠಿ ಮೂಲೆ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾರದೆ ಕಾಂಗ್ರೆಸ್ ಪಕ್ಷ ಅಪಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿಗೆ ಮತನೀಡುವ ಮೂಲಕ ತಕ್ಕ ಉತ್ತರವನ್ನು ಕ್ಷೇತ್ರದ ಮತದಾರರು ನೀಡಬೇಕು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಶಕ್ತಿ ಕೇಂದ್ರದ ಪ್ರಮುಖ್ ಉದಯರಮಣ ಭಟ್, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಮಾದವ ಮಾವೆ, ರಘರಾಮ ಶೆಟ್ಟಿ, ಕುಮಾರ್ ಭಟ್, ಜಯರಾಮ ಕುಟ್ರಕಲ ಮತ್ತಿತರರು ಉಪಸ್ಥಿತರಿದ್ದರು.