Friday, June 5, 2026
Homeಅಪರಾಧಕಸದ ಲಾರಿ ಹರಿದು ಸಾವನ್ನಪ್ಪಿದ ಬ್ಯಾಂಕ್ ಅಧಿಕಾರಿಣಿ, ಅನಾಥವಾದ ಮಗು ;ಮುಂಜಾಗೃತಾ ಕ್ರಮಕ್ಕೆ ಸೂಚನೆ

ಕಸದ ಲಾರಿ ಹರಿದು ಸಾವನ್ನಪ್ಪಿದ ಬ್ಯಾಂಕ್ ಅಧಿಕಾರಿಣಿ, ಅನಾಥವಾದ ಮಗು ;ಮುಂಜಾಗೃತಾ ಕ್ರಮಕ್ಕೆ ಸೂಚನೆ

- Advertisement -
- Advertisement -

ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಕಳೆದ ರಾತ್ರಿ ಬಿಬಿಎಂಪಿ ಕಸದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ರಾಷ್ಟ್ರೀಕೃತ ಬ್ಯಾಂಕ್‌ನ 40 ವರ್ಷದ ಮಹಿಳಾ ಉದ್ಯೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಆರ್ ಆರ್ ನಗರದ ನಿವಾಸಿ ಪದ್ಮನಿ ಡಿ ಮೃತ ದುರ್ದೈವಿ. ಸೇ ಮಾರ್ಕ್ಸ್ ರಸ್ತೆಯ ಶಾಖೆಯಲ್ಲಿ ಬ್ಯಾಂಕಿನ ಉಪ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ರಾತ್ರಿ 8 ಗಂಟೆ ಸುಮಾರಿಗೆ ನಾಯಂಡಹಳ್ಳಿ ಜಂಕ್ಷನ್ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಪೊಲೀಸರು ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಆಕೆಯ ಪಾರ್ಥಿವ ಶರೀರವನ್ನು ಇಂದು ಪೋಷಕರಿಗೆ ಹಸ್ತಾಂತರಿಸಲಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಓಡಿ ಹೋಗಿದ್ದಾನೆ.


ಏಪ್ರಿಲ್ 1ರಂದು ಬಾಗಲೂರಿನಲ್ಲಿ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದು 60 ವರ್ಷದ ರೈತ ರಾಮಯ್ಯ ಎಸ್. ಮಾರ್ಚ್ 21ರಂದು ಹೆಬ್ಬಾಳದಲ್ಲಿ ವೇಗವಾಗಿ ಬಂದ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಮತ್ತೋರ್ವ ಪಾದಚಾರಿ ಅಕ್ಷಯ (14) ಬಾಲಕಿ ಮೃತಪಟ್ಟಿದ್ದರು.

- Advertisement -

Latest News

error: Content is protected !!