ನವದೆಹಲಿ: ಕೋವಿಡ್ ನಿಂದಾಗಿ ಎಲ್ಲರಿಗೂ ಜೀವನ ನಿರ್ವಹಣೆ ಎಷ್ಟ ಕಷ್ಟವಾಗಿದೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳ ಪಾಡಂತೂ ದೇವರಿಗೇ ಪ್ರೀತಿ.
ಕುರುಕ್ಷೇತ್ರದಲ್ಲಿ ಬೀದಿ ಬದಿ ಚಹಾ ಮಾರಾಟ ಮಾಡುವ ಚಹಾ ವ್ಯಾಪಾರಿಯೊಬ್ಬ ಹೀಗೆ ವ್ಯಾಪಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಗಾಗಿ ಸಾಲಕ್ಕಾಗಿ ಆತನ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದ. ಆದರೆ ಹೀಗೆ ಸಾಲಕ್ಕೆ ಅರ್ಜಿ ಸಲ್ಲಿಸಿದವನಿಗೆ ಬ್ಯಾಂಕ್ 50 ಕೋಟಿ ರೂಪಾಯಿಯ ಶಾಕ್ ನೀಡಿದೆ.
ನೀವು, ಈಗಾಗಲೆ ತೆಗೆದುಕೊಂಡಿರುವ 50 ಕೋಟಿ ರೂ. ಸಾಲವನ್ನು ಹಿಂದಿರುಗಿಸಿಲ್ಲ. ಹಾಗಾಗಿ ನಿಮಗೆ ಹೊಸದಾಗಿ ಸಾಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಬ್ಯಾಂಕ್ ಸಿಬ್ಬಂದಿ ಚಹಾ ಮಾರಾಟಗಾರನ ಸಾಲದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಕೋವಿಡ್-19 ಪಿಡುಗಿನಿಂದಾಗಿ ವಹಿವಾಟು ಸರಿಯಾಗಿ ನಡೆಯದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಆದರೆ, ಬ್ಯಾಂಕ್ನವರು ನಾನು ಈಗಾಗಲೆ 50 ಕೋಟಿ ರೂ. ಸಾಲ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಅದು ಯಾವಾಗ ಇಷ್ಟೊಂದು ಸಾಲ ಮಾಡಿದೆನೋ, ಬ್ಯಾಂಕ್ನವರು ಅದು ಹೇಗೆ ಇಷ್ಟೊಂದು ಸಾಲವನ್ನು ನನಗೆ ಕೊಟ್ಟರೋ ನನಗೇ ತಿಳಿಯದಾಗಿದೆ ಎಂದು ಚಹಾ ಮಾರಾಟಗಾರ ಹೇಳಿದ್ದಾನೆ. ಅಲ್ಲದೇ ನಾನು ಯಾಕಾದ್ರೂ ಸಾಲಕ್ಕೆ ಅರ್ಜಿ ಸಲ್ಲಿಸಿದೆನೋ ಅಂತಾ ಇದೀಗ ಚಹಾ ಮಾರಾಟಗಾರ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ.