- Advertisement -
- Advertisement -
ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ಧೇಶಕರು ಪುತ್ತೂರು ತಾಲೂಕು ಸಮಿತಿಯ ಸಹ ಸಂಚಾಲಕ, ಶ್ರೀ ರಾಮಕೃಷ್ಣ ಪ್ರೌಢಶಾಲಾ ಆಡಳಿತ ಮಂಡಳಿಯ ಸದಸ್ಯ, ಉದ್ಯಮಿ ಬಳ್ಳಮಜಲುಗುತ್ತು ಅಜಯ್ ಆಳ್ವ (53 ವ) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಇವರು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರ ಸಹೋದರ ಮತ್ತು ಬಲ್ನಾಡು ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದರು.
ಮೃತರು ತಾಯಿ ಅನುಸೂಯ ಶೆಟ್ಟಿ, ಪತ್ನಿ ಸ್ಮಿತಾ ಎ ಆಳ್ವ, ಪುತ್ರಿ ಆತ್ಮಿ ,ಸಹೋದರರಾದ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶಿವರಾಮ ಆಳ್ವ, ಸಹೋದರಿಯರಾದ ಗೀತಾ ಶೆಟ್ಟಿರವರನ್ನು ಅಗಲಿದ್ದಾರೆ.
- Advertisement -