- Advertisement -
- Advertisement -
ಬೆಳ್ತಂಗಡಿ: ಮಹಾಮಳೆಗೆ ತಾಲೂಕಿನ ಅನೇಕ ಭಾಗಗಳಲ್ಲಿ ಹಾನಿಯಾಗಿದ್ದು ಕೆಲವು ಕಡೆ ಮರಗಳು ಬಂದು ಸೇರಿಕೊಂಡಿದೆ ಅದರಂತೆ ಬೆಳ್ತಂಗಡಿ ತಾಲೂಕಿನ ಉಜಿರೆಯ ನಿಡಿಗಲ್ ಸೇತುವೆ ಪಕ್ಕದ ಕಿಂಡಿಅಣೆಕಟ್ಟಿನಲ್ಲಿ ಮಳೆಗೆ ಮರದ ತುಂಡುಗಳು, ಕಸಕಡ್ಡಿಗಳು ಸೇರಿ ನೀರು ಹೋಗುದಕ್ಕೂ ತೊಂದರೆಯಾಗುತ್ತಿತ್ತು.
ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಇಂದು ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ನೇತ್ರತ್ವದ ಉಜಿರೆಯ “ಬದುಕು ಕಟ್ಟೋಣ ಬನ್ನಿ” ತಂಡದ ನೂರಕ್ಕೂ ಮಿಕ್ಕಿ ಸದಸ್ಯರು ಇಂದು(ಭಾನುವಾರ) ಬೆಳಗ್ಗೆಯಿಂದ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
- Advertisement -