Friday, June 27, 2025
Homeಕರಾವಳಿಕಳಂಜ: ಅಪಾಯಕ್ಕೆ ಸ್ವಾಗತ ಕೋರುತ್ತಿರುವ ಅಯ್ಯನಕಟ್ಟೆ ತಿರುವು

ಕಳಂಜ: ಅಪಾಯಕ್ಕೆ ಸ್ವಾಗತ ಕೋರುತ್ತಿರುವ ಅಯ್ಯನಕಟ್ಟೆ ತಿರುವು

spot_img
- Advertisement -
- Advertisement -

ಕಳಂಜ: ಮಳೆಗಾಲ ಬಂತೆಂದರೆ ರಸ್ತೆಗಳ ಸ್ಥಿತಿ ಅಯೋಮಯ ವಾಗುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿ ಮಳೆಗಾಲಕ್ಕೂ ಮುನ್ನವೇ ರಸ್ತೆಯೊಂದು ಅಸಮರ್ಪಕ ಮೋರಿ ವ್ಯವಸ್ಥೆಯಿಂದ ಅಪಾಯದ ಹಂತ ತಲುಪಿದೆ.

ಕಳಂಜ ಗ್ರಾಮದ ಅಯ್ಯನಕಟ್ಟೆ ತಿರುವು ‘ಚೊಕ್ಕಾಡಿ ಕ್ರಾಸ್’ ಈ ದುರಾವಸ್ಥೆಗೆ ತಲುಪಿದ ರಸ್ತೆ. ಈ ರಸ್ತೆಯು ಕಳಂಜ, ಅಮರಪಡ್ನೂರು ಮತ್ತು ಅಮರಮುಡ್ನೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದಲ್ಲದೆ, ಸುಳ್ಯಕ್ಕೆ ತಲುಪಲು ನೇರ ಸಂಪರ್ಕಕೊಂಡಿಯಾಗಿದೆ.

ಕೆಲವು ತಿಂಗಳುಗಳಿಂದ ಈ ರಸ್ತೆ ತಿರುವಿನ ಅಂಚು ಬಾಯ್ದೆರೆದುಕೊಂಡಿದ್ದು ಸವಾರರು ಹಾಗೂ ಪಾದಚಾರಿಗಳು ಎಚ್ಚರವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಗಮನಹರಿಸಬೇಕಿದೆ.

- Advertisement -
spot_img

Latest News

error: Content is protected !!