ನವದೆಹಲಿ : ಬಹಳಷ್ಟು ವಿವಾದಗಳನ್ನು ಸೃಷ್ಠಿಸಿ ಕರೊನಿಲ್ಗೆ ಈ ಹಿಂದೆ ತಡೆ ನೀಡಿದ್ದ ಆಯುಷ್ ಇಲಾಖೆ ಇಂದು ಅದರ ಮಾರಾಟಕ್ಕೆ ಅನುಮತಿ ನೀಡಿದೆ. ಆದರೆ ಒಂದು ಷರತ್ತನ್ನೂ ವಿಧಿಸಿದೆ. ಕರೊನಿಲ್ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ಪ್ರಚಾರ ಮಾಡಬಾರದು. ಬದಲಿಗೆ ಕರೊನಿಲ್ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಮಾರಾಟ ಮಾಡಬೇಕು ಎಂದು ಆಯುಷ್ ಇಲಾಖೆ ಹೇಳಿದೆ.
ಕಂಪನಿಯು ಕಳೆದ ವಾರ ಪ್ರಾರಂಭಿಸಿದ ಕೊರೊನಿಲ್ ಎಂಬ ಔಷಧಿಯನ್ನು ಕರೋನ ವೈರಸ್ಗೆ ಔಷಧಿಯಾಗಿ ಮಾರಾಟ ಮಾಡಲು ಯಾವುದೇ ಸರ್ಕಾರದ ನಿರ್ಬಂಧಗಳಿಲ್ಲ ಎಂದು ಪತಂಜಲಿ ಆಯುರ್ವೇದ ಬುಧವಾರ ಹೇಳಿದೆ. ಹರಿದ್ವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಯೋಗ ಗುರು ರಾಮದೇವ್, ಆಯುಷ್ ಸಚಿವಾಲಯವು ಪತಂಜಲಿ “COVID-19 ನಿರ್ವಹಣೆಗೆ ಸೂಕ್ತವಾದ ಕೆಲಸವನ್ನು ಮಾಡಿದೆ ಅಂತ ಹೇಳಿದರು. ಈ ಔ ಷಧಿಗಳನ್ನು ಪ್ರಯತ್ನಿಸಲು ಬಯಸುವ ಜನರಿಗೆ ಈಗ ತಮ್ಮ ಮಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಲು ಬಯಸುತ್ತೇನೆ ಮತ್ತು ಅವು ಇಂದಿನಿಂದ ದೇಶದ ಎಲ್ಲೆಡೆ ಕಿಟ್ನಲ್ಲಿ ಲಭ್ಯವಿರುತ್ತವೆ ಎಂದು ರಾಮ್ದೇವ್ ಹೇಳಿದರು.
“ಕೋವಿಡ್ ಟ್ರೀಟ್ಮೆಂಟ್” ಬದಲಿಗೆ “ಕೋವಿಡ್ ಮ್ಯಾನೇಜ್ಮೆಂಟ್” ಎಂಬ ಪದವನ್ನು ಬಳಸಲು ಆಯುಷ್ ಸಚಿವಾಲಯ ಕೇಳಿದೆ ಎಂದು ಯೋಗ ಗುರು ಹೇಳಿದರು.
ಈ ಬಗ್ಗೆ ಸಚಿವಾಲಯವೇ ಸ್ಪಷ್ಟಪಡಿಸಿದ್ದು, ಪತಂಜಲಿ ಸಂಸ್ಥೆ ಕರೊನಿಲ್ ಔಷಧಿಯನ್ನು ಮಾರಾಟ ಮಾಡಬಹುದು. ಆದರೆ ಅದು ಕೊವಿಡ್-19 ನಿವಾರಣೆ ಮಾಡುತ್ತದೆ ಎಂದು ಪ್ರತಿಪಾದಿಸಬಾರದು. ಇಮ್ಯೂನಿಟಿ ಬೂಸ್ಟರ್ ಎಂದೇ ಹೇಳಬೇಕು ಎಂದು ತಿಳಿಸಿದೆ.
ಕರೊನಿಲ್ ಮಾತ್ರೆಗಳ ಕ್ಲಿನಿಕಲ್ ಟೆಸ್ಟ್ನ ದಾಖಲೆಗಳನ್ನು ಪತಂಜಲಿ ಸಂಸ್ಥೆ ಆಯುಷ್ ಇಲಾಖೆಗೆ ಸಲ್ಲಿಸಿತ್ತು.
ಪತಂಜಲಿ ಕೊರೊನಿಲ್ ಅನ್ನು ಮಾರಾಟ ಮಾಡಬಹುದು : ಆದರೆ ಷರತ್ತು ಅನ್ವಯ !
- Advertisement -
- Advertisement -
- Advertisement -