Thursday, May 16, 2024
Homeಕರಾವಳಿವಿಟ್ಲ; ಯುವಕನಿಗೆ ಚೂರಿಯಿಂದ ಚುಚ್ಚಿ ಹಲ್ಲೆ

ವಿಟ್ಲ; ಯುವಕನಿಗೆ ಚೂರಿಯಿಂದ ಚುಚ್ಚಿ ಹಲ್ಲೆ

spot_img
- Advertisement -
- Advertisement -

ವಿಟ್ಲ; ಯುವಕನೊಬ್ಬನಿಗೆ ಚೂರಿಯಿಂದ ಚುಚ್ಚಿ ಹಲ್ಲೆ ನಡೆಸಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಅಬ್ದುಲ್ ಅಜೀಜ್ ಎಂಬಾತನಿಗೆ ಅಬೂಬಕ್ಕರ್ ಸಿದ್ದೀಕ್ ಎಂಬಾತ ಚೂರಿಯಿಂದ ಚುಚ್ಚಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಅಬೂಬಕ್ಕರ್ ಸಿದ್ದೀಕ್ ಮಕ್ಕಳ ಎದುರು ಸಿಗರೇಟು ಸೇದುತ್ತಿದ್ದ ಎನ್ನಲಾಗಿದ್ದು, ಅದಕ್ಕೆ ಅಬ್ದುಲ್ ಅಜೀಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಇದೇ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.

ಭಾನುವಾರ ಅಬ್ದುಲ್ ಅಜೀಜ್ ಮನೆಯಲ್ಲಿರುವಾಗ ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿನ‌ ಕರೀಂ ಎಂಬವರ ಚಿಕನ್‌ಸೆಂಟರ್ ಗೆ ಬರುವಂತೆ ಸಿದ್ದೀಕ್ ಹೇಳಿದ್ದಾನೆ. ಈ ವೇಳೆ ಬಂದ ಬಂದ ಅಜೀಜ್ ಗೆ ಅವಾಚ್ಯವಾಗಿ ನಿಂದಿಸಿ ಚಿಕನ್ ಸೆಂಟರ್ ನಿಂದ ಚೂರಿ ತಂದು ಚುಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.ಸಿಗರೇಟ್ ಸೇದಬಾರದೆಂದು ನನಗೆ ನೀನು ಬುದ್ದಿ ಹೇಳುತ್ತೀಯಾ ಎಂದು ಬೈದು , ಚಿಕನ್ ಸೆಂಟರ್ ನಲ್ಲಿದ್ದ ಚೂರಿಯನ್ನು ಹಿಡಿದುಕೊಂಡು ಬಂದು ಸಿದ್ದೀಕ್ ಎದೆಯ ಕೆಳಗೆ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದಾನೆಂದು ಆರೋಪಿಸಲಾಗಿದೆ.

ಈ ವೇಳೆ ಅಲ್ಲೇ ಇದ್ದ ಇಶಾಮ್, ಕರೀಂ, ಜಲೀಲ್ ತಡೆದಿದ್ದಾರೆ.ಬಳಿಕ ಸಿದ್ದೀಕ್ ಕೊಲೆ ಬೆದರಿಕೆ ಹಾಕಿ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.ಗಾಯಾಳು ಅಜೀಜ್ ನನ್ನು  ವಿಟ್ಲ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಯ ಬಂಧನಕ್ಕೆ ಬಲೆ ಬೀಸಿದ್ದಾರೆ.

- Advertisement -
spot_img

Latest News

error: Content is protected !!