Thursday, May 16, 2024
Homeಕರಾವಳಿಬೈಕ್ ಸವಾರನಿಗೆ ಅನ್ಯಕೋಮಿನ ಯುವತಿಯ ಸ್ಕೂಟಿ ಡಿಕ್ಕಿ: ಇದೇ ಕೋಪಕ್ಕೆ ಬೈಕ್ ಸವಾರನ ಮೇಲೆ ಮಾರಣಾಂತಿಕ...

ಬೈಕ್ ಸವಾರನಿಗೆ ಅನ್ಯಕೋಮಿನ ಯುವತಿಯ ಸ್ಕೂಟಿ ಡಿಕ್ಕಿ: ಇದೇ ಕೋಪಕ್ಕೆ ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಯುವತಿಯ ಸಹೋದರ

spot_img
- Advertisement -
- Advertisement -

ಮಂಗಳೂರು: ಬೈಕ್ ಸವಾರನೋರ್ವನಿಗೆ ಸ್ಕೂಟಿ ಚಲಾಯಿಸುತ್ತಿದ್ದ ಅಲ್ಪಸಂಖ್ಯಾತ ಯುವತಿಯೋರ್ವಳು ಢಿಕ್ಕಿ ಹೊಡೆದ ಘಟನೆಯನ್ನೇ ಮುಂದಿಟ್ಟು ಕೊಂಡು ಇಂದು ಯುವತಿಯ ತಮ್ಮ ಮತ್ತು ಮತ್ತಿಬ್ಬರು ಸೇರಿ ಬೈಕ್ ಸವಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲ ಧರ್ಮನಗರ ನಿವಾಸಿ ದಿವಾಕರ್ (34)ಹಲ್ಲೆಗೊಳಗಾದ ಯುವಕ. ದಿವಾಕರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದು ನಿನ್ನೆ ಬೆಳಿಗ್ಗೆ 9 ಗಂಟೆಯ ವೇಳೆ ಅಬ್ಬಕ್ಕ ಸರ್ಕಲ್ ನ ATM ಸೆಂಟರ್ ಬಳಿ ತಾನು ಚಲಾಯಿಸುತ್ತಿದ್ದ ಬೈಕನ್ನು ಧರ್ಮನಗರದ ಕಡೆಗೆ ತಿರುಗಿಸುತ್ತಿದ್ದರು. ಈ ವೇಳೆ ವೇಳೆ ಹಿಂದಿನಿಂದ ಸ್ಕೂಟಿಯಲ್ಲಿ ಬಂದ ಅಲ್ಪಸಂಖ್ಯಾತ ಸಮುದಾಯದ ಯುವತಿ ದಿವಾಕರ್ ಅವರ ಬೈಕ್ಗೆ ಢಿಕ್ಕಿ ಹೊಡೆದಿದ್ದರೆನ್ನಲಾಗಿದೆ.ಈ ವೇಳೆ ಯುವತಿ ಮತ್ತು ದಿವಾಕರ್ ಅವರ ದ್ವಿಚಕ್ರ ವಾಹನಗಳು ಜಖಂಗೊಂಡಿದ್ದು ಇಬ್ಬರ ನಡುವೆ ವಾದ ವಿವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ದಿವಾಕರ್ ಪೊಲೀಸ್ ಠಾಣೆಗೆ ತೆರಳೋದಕ್ಕೆ ಮುಂದಾಗಿದ್ದಾರೆ. ಆಗ ಯುವತಿ ದಿವಾಕರ್ ತನ್ನ ಸಹೋದರ ಮಾತನಾಡುತ್ತಾನೆಂದು ಹೇಳಿ ದಿವಾಕರ್ ಅವರ ಮೊಬೈಲ್ ನಂಬರ್ ಪಡೆದು ಅಲ್ಲಿಂದ ತೆರಳಿದ್ದಾಳೆ.

ಇನ್ನು ನಿನ್ನೆ ರಾತ್ರಿ ದಿವಾಕರ್ ಅವರಿಗೆ ಕರೆ ಮಾಡಿದ ವ್ಯಕ್ತಿಯೋರ್ವ ಯುವತಿಯ ಸಹೋದರನೆಂದು ಹೇಳಿಕೊಂಡಿದ್ದು ಮಾತಾನಾಡಲು ಸಿಗುವಂತೆ ಹೇಳಿದ್ದಾನೆ. ಇಂದು ಸಂಜೆ 6 ಗಂಟೆಗೆ ಮತ್ತೆ ಕರೆ ಮಾಡಿದ ಅದೇ ವ್ಯಕ್ತಿ ಧರ್ಮನಗರ ರಝಾಕ್ ಎಂಬವರ ಅಂಗಡಿ ಮುಂಭಾಗ ಕರೆಸಿಕೊಂಡಿದ್ದು ಸ್ಕೂಟಿ ಜಖಂ ಗೊಂಡಿದ್ದರ ಖರ್ಚು 4,500 ರೂಪಾಯಿ ನೀಡುವಂತೆ ತಗಾದೆ ಶುರು ಮಾಡಿದ್ದಾನೆ. ದಿವಾಕರ್ ಅವರು ತನ್ನ ಬೈಕ್ ಕೂಡ ಜಖಂಗೊಂಡಿದ್ದು ಅದರ ಖರ್ಚನ್ನು ಕೇಳಿದ್ದು ಪೊಲೀಸ್ ನೀಡುವ ಎಂದು ಹೇಳಿದ್ದಾರೆ. ಅಷ್ಟಕ್ಕೆ ಕೋಪಗೊಂಡ ಯುವತಿಯ ಸಹೋದರ ಮತ್ತು ಆತನ ಜೊತೆಯಲ್ಲಿದ್ದ ಇಬ್ಬರು ಯುವಕರು ಸೇರಿ ದಿವಾಕರ್ ಅವರಿಗೆ ಕೈ ಮತ್ತು ತಲೆಗೆ ಕಲ್ಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಇನ್ನು ಗಾಯಾಳು ದಿವಾಕರ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಗೆ ಭೇಟಿ ನೀಡಿದ ಭಜರಂಗದಳ ಉಳ್ಳಾಲ ಪ್ರಖಂಡದ ಪ್ರಮುಖರು ಘಟನೆಯನ್ನು ಖಂಡಿಸಿದ್ದು ಆರೋಪಿಗಳ ಶೀಘ್ರ ಬಂಧನಕ್ಕೆ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!